ವಾಲಿದ 5 ಅಂತಸ್ತಿನ ಕಟ್ಟಡ ತೆರವು

388

ಬೆಂಗಳೂರು: ನಗರದ ಕೆಂಪಾಪುರದಲ್ಲಿ ವಾಲಿದ 5 ಅಂತಸ್ತಿನ ಕಟ್ಟಡವನ್ನ ತೆರವು ಮಾಡುವ ಕೆಲಸ ಶುರುವಾಗಿದೆ. ಹೆಬ್ಬಾಳ ಸಮೀಪದ ಕೆಂಪಾಪುರದಲ್ಲಿನ 5 ಅಂತಸ್ತಿನ ಕಟ್ಟಡವೊಂದು ಬುಧವಾರ ಬೆಳಗ್ಗೆ ವಾಲಿತ್ತು. ಈಗಾಗ್ಲೇ ಇಲ್ಲಿನ ಜನರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಕಟ್ಟಡ ತೆರವು ಕೆಲಸ ನಡೆದಿದೆ.

ಬಿಬಿಎಂಪಿ ಮೇಯರ್ ಗೌತಮಕುಮಾರ, ಶಾಸಕ ಕೃಷ್ಣಬೈರೇಗೌಡ, ಬಿಬಿಎಂಪಿ ಆಯುಕ್ತ ಬಿ.ಎಚ್ ಅನೀಲಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಬಳಿಕ ಅಧಿಕಾರಿಗಳ ಜೊತೆ ವಾಲಿರುವ ಕಟ್ಟಡವನ್ನ ಸುರಕ್ಷಿತವಾಗಿ ತೆರವುಗೊಳಿಸುವ ಬಗ್ಗೆ ಚರ್ಚೆ ನಡೆಸಿದ್ರು. ಇದೀಗ ಸಕಲ ಸುರಕ್ಷತೆಯ ಕ್ರಮಗಳನ್ನ ತೆಗೆದುಕೊಂಡು ತೆರವು ಕಾರ್ಯಾಚರಣೆ ನಡೆದಿದೆ. ಇದ್ರಿಂದ ಸುತ್ತಲಿನ ಯಾವುದೇ ಕಟ್ಟಡಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. 5 ಅಂತಿಸ್ತಿನ ಕಟ್ಟಡದ ಹಿಂದೆ ಮನೆ ಕಟ್ಟಲು 8 ಅಡಿ ಆಳದ ಹಳ್ಳ ತೆಗೆಯಲಾಗಿತ್ತು. ಈ ವೇಳೆ ಕಟ್ಟಡ ವಾಲಿದೆ ಅನ್ನೋದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!