ಕೋಕ್ರಜಾರ್: ಕಾಂಗ್ರೆಸ್ ಸಂಸದ ರಾಹುಲ ಗಾಂಧಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ 48 ಗಂಟೆಯಲ್ಲಿ ಮತ್ತೊಮ್ಮೆ ತಿರುಗೇಟು ನೀಡಿದ್ದಾರೆ. ಬೋಡೋ ಶಾಂತಿ ಒಪ್ಪಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ, ಕಾಂಗ್ರೆಸ್ ಯುವ ನಾಯಕನ ಹೇಳಿಕೆಯನ್ನ ಪ್ರಸ್ತಾಪ ಮಾಡಿದ್ದಾರೆ.
ನಿಮ್ಮ ಪ್ರೀತಿಯ ರಕ್ಷಣೆ ಇರುವಾಗ ಯಾವುದೇ ಏಟಿಗೆ ನಾನು ಅಂಜಬೇಕಾದ ಅವಶ್ಯಕತೆಯಿಲ್ಲವೆಂದು ಹೇಳುವ ಮೂಲಕ, ಪರೋಕ್ಷವಾಗಿ ರಾಹುಲ ಗಾಂಧಿ ಹೇಳಿಕೆಗೆ ಪ್ರಧಾನಿ ತಿರುಗೇಟು ನೀಡಿದ್ದಾರೆ. ಅಸ್ಸಾಂನಲ್ಲಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮೂವರು ಸಾವನ್ನಪ್ಪಿದ್ರು. ಇದೆಲ್ಲ ನಡೆದಿರುವ ಬೆನ್ನೆಲ್ಲೇ ಪ್ರಧಾನಿ ಇಲ್ಲಿಗೆ ಭೇಟಿ ನೀಡಿದ್ದಾರೆ.
ಆರು ತಿಂಗಳಲ್ಲಿ ಪ್ರಧಾನಿಗೆ ಜನತೆ ದೊಣ್ಣೆಯಲ್ಲಿ ಬೆನ್ನಿಗೆ ಹೊಡೆಯುವ ಸ್ಥಿತಿ ಬರುತ್ತೆ ಎಂದು ಸಂಸದ ರಾಹುಲು ಗಾಂಧಿ ಹೇಳಿದ್ರು. ಈ ಬಗ್ಗೆ ಗುರುವಾರ ಸಂಸತ್ತಿನಲ್ಲಿ ಮಾತ್ನಾಡಿದ ಮೋದಿ, ನಾನು ನನ್ನ ಸೂರ್ಯ ನಮಸ್ಕಾರದ ಸಮಯವನ್ನ ಹೆಚ್ಚು ಮಾಡಿಕೊಳ್ಳುತ್ತೇನೆ. ನನ್ನ ಬೆನ್ನು ಇನ್ನಷ್ಟು ಗಟ್ಟಿಗೊಳ್ಳಲಿದ್ದು, ಆಗ ಎಲ್ಲ ರೀತಿಯ ಪೆಟ್ಟುಗಳನ್ನ ಸಹಿಸಿಕೊಳ್ಳಬಹುದು ಎಂದು ಹೇಳುವ ಮೂಲಕ ರಾಹುಲ ಗಾಂಧಿ ಕಾಲೆಳೆದಿದ್ರು.