ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಪೈಲ್ವಾನರು ತಮ್ಮ ಬೇಡಿಕೆ ಈಡೇರಿಕೆಗಾಗಿ ಸಿಎಂ ಮನೆ ಮುಂದೆ ಧರಣಿ ನಡೆಸಿದ್ರು. ಹಿಂದಿನ ಸಿಎಂ ಯಡಿಯೂರಪ್ಪ ಮಾಸಾಶನ ಹೆಚ್ಚಿಸುವುದಾಗಿ ಮಾತು ಕೊಟ್ಟಿದ್ದರು. ಆದ್ರೆ, ಅದು ಇದುವರೆಗೂ ಆಗಿಲ್ಲ. ಹೀಗಾಗಿ ಇದನ್ನು ಕೇಳಲು ಬಂದಿದ್ದೇವೆ ಎಂದರು.
ಅಧಿಕಾರಿಗಳನ್ನ ಕೇಳಿದರೆ ಕೋವಿಡ್ ನೆಪ ಹೇಳುತ್ತಿದ್ದಾರೆ. ಬಯಸದೆ ಬಂದ ಭಾಗ್ಯದಂತೆ ಬೊಮ್ಮಾಯಿ ಅವರು ಸಿಎಂ ಆಗಿದ್ದಾರೆ. ಇವರಾದರೂ ನಮ್ಮ ಬೇಡಿಕೆ ಈಡೇರಿಸುತ್ತಾರೆ ಎಂದು ಬಂದಿದ್ದೇವೆ ಅಂತಾ ಹೇಳಿದ್ರು. ಆರ್.ಟಿ ನಗರದಲ್ಲಿ ಸಿಎಂ ಬೊಮ್ಮಾಯಿ ಖಾಸಗಿ ನಿವಾಸದ ಎದುರು ಪೈಲ್ವಾನರು ಜಮಾಯಿಸಿದ್ರು.