ಇನ್ನು ದೇಶದ ಚಿತ್ತ ಶನಿವಾರದತ್ತ

171

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಳೆದ ಒಂದೂವರೆ ತಿಂಗಳಿನಿಂದ ಚುನಾವಣೆ ಅಬ್ಬರ ಜೋರಾಗಿತ್ತು. ಬುಧವಾರ ಮತದಾನ ನಡೆಯುವ ಮೂಲಕ ಒಂದು ಹಂತದ ಆಟಕ್ಕೆ ಬ್ರೇಕ್ ಬಿದ್ದಿದೆ. ಈಗ ಉಳಿದಿರುವುದು ಫಲಿತಾಂಶ ಮಾತ್ರ. ಹೀಗಾಗಿ ಇಡೀ ದೇಶದ ಚಿತ್ತ ಶನಿವಾರದತ್ತ ಮೂಡಿದೆ.

ಈಗಾಗ್ಲೇ ಮತದಾನೋತ್ತರ ಸಮೀಕ್ಷೆ ಬಂದಿದೆ. ಬಹುತೇಕ ಸಂಸ್ಥೆಗಳ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆ ಬಹುಮತ ಬರಲಿದೆ ಎಂದು ತಿಳಿದು ಬಂದಿದೆ. ಆಡಳಿತ ವಿರೋಧಿ ಅಲೆ ಜೋರಾಗಿದ್ದು, ಕೈ ನಾಯಕರು ಮರಳಿ ಅಧಿಕಾರಕ್ಕೆ ಬರಲಿದ್ದಾರೆ ಎನ್ನಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ಸಿಎಂ ಬೊಮ್ಮಾಯಿ, ಮತದಾನೋತ್ತರ ಸಮೀಕ್ಷೆಗಳು ಬಹುತೇಕ ಸತ್ಯವಲ್ಲ. ಬಿಜೆಪಿ ಬಹುಮತದೊಂದಿಗೆ ಮತ್ತೆ ಆಡಳಿತ ನಡೆಸಲಿದೆ ಎಂದಿದ್ದಾರೆ. ಇದೆ ಮಾತನ್ನು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆದರೆ, ಮೇ 13 ಶನಿವಾರ ಹೊರ ಬೀಳುವ ಫಲಿತಾಂಶದಲ್ಲಿ ಎಲ್ಲರ ಪ್ರಶ್ನೆಗೂ ಉತ್ತರ ಸಿಗಲಿದೆ.




Leave a Reply

Your email address will not be published. Required fields are marked *

error: Content is protected !!