ರಾಜ್ಯ ಬಿಜೆಪಿಯಲ್ಲಿ 2 ಸಮುದಾಯಕ್ಕೆ ಸಂಪುಟ ಸೀಮಿತ: ಶಾಸಕ ತಿಪ್ಪಾರೆಡ್ಡಿ

193

ಪ್ರಜಾಸ್ತ್ರ ಸುದ್ದಿ

ಚಿತ್ರದುರ್ಗ: ನಾನು ಆರು ಬಾರಿ ಶಾಸಕನಾಗಿದ್ದೇನೆ. 20 ವರ್ಷಗಳ ರಾಜಕೀಯ ಅನುಭವ ಇದೆ. ನನಗ್ಯಾಕೆ ಸಚಿವ ಸ್ಥಾನ ನೀಡುತ್ತಿಲ್ಲ ಅರ್ಥವಾಗುತ್ತಿಲ್ಲ. ರಾಜ್ಯ ಬಿಜೆಪಿಯಲ್ಲಿ 2 ಸಮುದಾಯಕ್ಕೆ ಸಂಪುಟ ಸೀಮಿತವಾಗಿದೆ ಎಂದು ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯದಲ್ಲಿ ಲೋಪವಿದೆ. ನಾನು ಒಂದು ಜಾತಿಯಿಂದ ವೋಟ್ ಪಡೆದು ಶಾಸಕನಾಗಿಲ್ಲ. ಆದರೆ, ರಾಜ್ಯದಲ್ಲಿ ಎರಡು ಸಮುದಾಯದವರಿಗೆ ಸಂಪುಟ ಸೀಮಿತವಾಗಿದೆ. ಇದರಿಂದಾಗಿ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಈ ಹಿಂದೆ ಯಡಿಯೂರಪ್ಪನವರು ಸಹ ಭರವಸೆ ನೀಡಿದ್ದರು. ಈಗ್ಲಾದರೂ ಸಾಮಾಜಿಕ ಪರಿಕಲ್ಪನೆ ಕಾಪಾಡುತ್ತಾರೆ ಅನ್ನೋ ಭರವಸೆ ಇದೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!