ಪ್ರಜಾಸ್ತ್ರ ಸುದ್ದಿ
ಬೀದರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಕ್ಕಳಿಬ್ಬರಿಗೆ ವಿಷವೂಣಿಸಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಜಿಲ್ಲೆಯ ಬಾಲ್ಕಿ ತಾಲೂಕಿನ ನೀಲಮ್ಮನಹಳ್ಳಿ ತಾಂಡಾದಲ್ಲಿ ನಡೆದಿದೆ.
ಮೀರಾಬಾಯಿ(25), ಮಕ್ಕಳಾದ ನಚ್ಚುಬಾಯಿ(03) ಹಾಗೂ ಗೋಲುಬಾಯಿ(02) ಮೃತ ದುರ್ದೈವಿಗಳು. ಏನು ಅರಿಯದ ಇಬ್ಬರು ಪುಟ್ಟ ಮಕ್ಕಳು ತಾಯಿಯ ದುಡುಕಿನ ನಿರ್ಧಾರಕ್ಕೆ ಪ್ರಾಣ ಕಳೆದುಕೊಂಡಿವೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.