ಕೆಲಸಕ್ಕಿಂತ ಕ್ರೆಡಿಟ್ ಗೆ ಹೆಚ್ಚಿನ ಆದ್ಯತೆ: ಸಂಸದೆ ಸುಮಲತಾ

486

ಪ್ರಜಾಸ್ತ್ರ ಸುದ್ದಿ

ಮೈಸೂರು: ನನ್ನ ಮೇಲೆ ವಿಶ್ವಾಸವಿಟ್ಟು ಜನರು ಆಯ್ಕೆ ಮಾಡಿದ್ದಾರೆ. ಮಂಡ್ಯದಲ್ಲಿ ಕೆಲಸಕ್ಕಿಂತ ಕ್ರೆಡಿಟ್ ಗೆ ಆದ್ಯತೆ ಹೆಚ್ಚಿದೆ ಎಂದು ವಿರೋಧಿಗಳ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ಕಿಡಿ ಕಾರಿದರು.

ಶಿಂಷಾ ಸೇತುವೆ ವಿಚಾರಕ್ಕೆ ನಾನು ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದೇನೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದೇನೆ. ನಾಲ್ಕು ಬಾರಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ನನ್ನ ಕ್ಷೇತ್ರದ ಕೆಲಸ ನಾನು ಮಾಡುತ್ತೇನೆ. ಮಾಡಿಲ್ಲ ಎಂದರೆ ನಾನು ಸುಮ್ಮನಿರುವುದಿಲ್ಲವೆಂದು ಆಕ್ರೋಶ ಹೊರ ಹಾಕಿದರು.




Leave a Reply

Your email address will not be published. Required fields are marked *

error: Content is protected !!