ಕೊಲಂಬೊ: ಕ್ರಿಕೆಟ್ ದುನಿಯಾದಲ್ಲಿ ತಮ್ಮದೆಯಾದ ಬೌಲಿಂಗ್ ಶೈಲಿಯಿಂದ ಗುರುತಿಸಿಕೊಂಡಿರುವ ಬೌಲರ್ ಗಳಲ್ಲಿ ಮುತ್ತಯ್ಯ ಮುರಳೀಧರನ್ ಇದೀಗ ರಾಜ್ಯಪಾಲ ಆಗ್ತಿದ್ದಾರೆ.
ಶ್ರೀಲಂಕಾದ ನೂತನ ಅಧ್ಯಕ್ಷ ಗೋಟಬಯ ರಾಜಪಕ್ಷೆ ಅವರು ಮುತ್ತಯ್ಯ ಮುರಳೀಧರನ್ ಅವರನ್ನ, ಉತ್ತರ ಪ್ರಾಂತ್ಯದ ರಾಜ್ಯಪಾಲ ಹುದ್ದೆಯನ್ನ ನೀಡಿದ್ದಾರೆ. ರಾಜಪಕ್ಷೆ ಸಚಿವ ಸಂಪುಟ ರಚನೆ ಮಾಡಿದ್ದು 35 ಮಂದಿ ಸಚಿವರ ಮತ್ತು ಮೂವರು ಉಪ ಸಚಿವರನ್ನ ನೇಮಕ ಮಾಡಲಾಗಿದೆ.
ಹಿರಿಯ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರಿಗೆ ಉತ್ತರ ಪ್ರಾಂತ್ಯದ ರಾಜ್ಯಪಾಲ ಹುದ್ದೆ ನೀಡಲಾಗಿದೆ. ಅನುರಾಧ ಯುಹಂಪಥ ಪೂರ್ವ ರಾಜ್ಯಪಾಲರಾಗಲಿದ್ದಾರೆ. ಈ ಮೂಲಕ ವಿಶ್ವಕಂಡ ಶ್ರೇಷ್ಠ ಬೌಲರ್ ಹೊಸ ಹುದ್ದೆ ಅಲಂಕರಿಸಲಿದ್ದಾರೆ.