ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಮರ್ಡರ್

305

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ವ್ಯಕ್ತಿಯೊಬ್ಬನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. 30 ವರ್ಷದ ಕೃಷ್ಣಮೂರ್ತಿ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಕಾವಲಭೈರಸಂದ್ರ ಹತ್ತಿರದ ಅಂಬೇಡ್ಕರ್ ಕಾಲೇಜು ಬಳಿ ಈ ಕೃತ್ಯ ನಡೆದಿದೆ.

2-3 ಜನರಿಂದ ಈ ದುಷ್ಕೃತ್ಯ ನಡೆದಿದೆ ಎನ್ನಲಾಗ್ತಿದೆ. ಡಿ.ಜೆ ಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯ ಹಿಂದೆ ಎರಡನೇ ಹೆಂಡ್ತಿಯ ಕೈವಾಡ ಇರಬಹುದು ಅನ್ನೋ ಶಂಕೆ ವ್ಯಕ್ತವಾಗಿದೆ. ಈ ಆಯಾಮದಲ್ಲಿಯೂ ತನಿಖೆ ನಡೆಯುತ್ತಿದೆ.

ಟೈಲ್ಸ್ ಕೆಲಸ ಮಾಡ್ತಿದ್ದ ಕೃಷ್ಣಮೂರ್ತಿ, ಮೊದಲ ಹೆಂಡ್ತಿ ತೊರೆದು 2ನೇ ಮದುವೆಯಾಗಿದ್ದ. ಆದ್ರೆ, ಕುಡಿದು ಬಂದು ನಿತ್ಯ ಗಲಾಟೆ ಮಾಡ್ತಿದ್ದನಂತೆ. ಹೀಗಾಗಿ ಇವರ ಗಲಾಟೆ ಹಲವು ಬಾರಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ. ಪೊಲೀಸರು ಇಬ್ಬರಿಗೆ ಬುದ್ದಿವಾದ ಹೇಳಿ ಕಳಿಸಿದ್ರು. ಗಂಡನ ಕಾಟ ತಾಳಲಾರದೆ 2ನೇ ಹೆಂಡ್ತಿಯೇ ಸುಪಾರಿ ಕೊಟ್ಟಿರಬಹುದಾ ಅನ್ನೋ ಶಂಕೆ ವ್ಯಕ್ತವಾಗಿದೆ.




Leave a Reply

Your email address will not be published. Required fields are marked *

error: Content is protected !!