ಮೈಸೂರು ಘಟನೆ ಖಂಡಿಸಿದ ನಟಿಯರು

776

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯನ್ನ ಸ್ಯಾಂಡಲ್ ವುಡ್ ನಟಿಯರು ಖಂಡಿಸಿದ್ದಾರೆ. ಹಿರಿಯ ನಟಿ ಶ್ರುತಿ, ಯುವ ನಟಿಯರಾದ ಅಧಿತಿ ಪ್ರಭುದೇವ್, ಹರ್ಷಿಕಾ ಪೂಣಚ್ಚ ಅವರು ಮಾತ್ನಾಡಿದ್ದಾರೆ.

ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ ಶ್ರುತಿ, ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ ಎಂದು ಪ್ರಶ್ನಿಸಿದ್ದಾರೆ.

ನಾವು ಯಾವ ಕಾಲದಲ್ಲಿ ಇದ್ದೇವೆ. ಘಟನೆ ಬಗ್ಗೆ ತಿಳಿದು ಭಯ ಶುರುವಾಗಿದೆ. ಹೆಣ್ಮಕ್ಕಳು ಕಷ್ಟದಲ್ಲಿದ್ದರೆ ದಯವಿಟ್ಟು ಸಹಾಯ ಮಾಡಿ. ಕೆಟ್ಟದ್ದು ನಡೆಯೋಕೆ ಬಿಡಬೇಡಿ ಎಂದು ನಟಿ ಹರ್ಷಿಕಾ ಪೊಣಚ್ಚ ಹೇಳಿದ್ದಾರೆ.

ಇನ್ನು ನಟಿ ಅಧಿತಿ ಪ್ರಭುದೇವ್ ಮಾತ್ನಾಡಿ, ಇಂತಹ ಘಟನೆ ನಡೆದಾಗಿ ಭಯವಾಗುತ್ತೆ. ಸಿಟ್ಟು ಬರುತ್ತೆ. ಮತ್ತೆ ಮತ್ತೆ ಹೀನ ಕೃತ್ಯಗಳು ನಡೆಯುತ್ತಲೇ ಇವೆ. ನೋಡುಗರ ದೃಷ್ಟಿ ಬದಲಾಗಬೇಕು. ಹೆಣ್ಮಕ್ಕಳಿಗೆ ಗಂಡು ಮಕ್ಕಳು ಶಕ್ತಿಯಾಗಿ ನಿಲ್ಲಬೇಕು. ನಮ್ಮನ್ನ ಕಾಳಜಿ ಮಾಡಬೇಕು. ಸಂಸ್ಕಾರದಿಂದ ವರ್ತಿಸುವುದನ್ನ ಕಲಿಯಿರಿ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!