ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬಿಜೆಪಿ ರಾಜ್ಯಧ್ಯಕ್ಷ ನಳೀನಕುಮಾರ ಕಟೀಲ್ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದು, ಕಟೀಲ ಒಬ್ಬ ಕಾಡು ಮನುಷ್ಯ. ನಾಗರಿಕ ಜತ್ತಿನಲ್ಲಿ ಇರಲು ನಾಲಯಕ್ ಎಂದಿದ್ದಾರೆ. ಜನರ ಹಿತದೃಷ್ಟಿಯಿಂದ ಈ ವ್ಯಕ್ತಿಯನ್ನ ಬಿಜೆಪಿ ಕಾಡಿಗೆ ಬಿಡಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕಾಡಿಗೆ ಹುಲಿ ಓಡಿಸುತ್ತೇನೆ. ಬಂಡೆ ಒಡಿಯುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಒಬ್ಬ ಕಾಡುಮನುಷ್ಯ. ಬಿಜೆಪಿ ಸೇರಬೇಕಾದ್ರೆ 10 ವರ್ಷ ಕಚೇರಿ ಕಸ ಗುಡಿಸಬೇಕು ಎಂದಿದ್ದ ಈಶ್ವರಪ್ಪ ಹೇಳಿದ್ರು. ಕಟೀಲನನ್ನ ಇನ್ನೂ ಒಂದು 10 ವರ್ಷ ಕಸ ಗುಡಿಸಲು ಹಚ್ಚಿದ್ರೆ ಬುದ್ದಿ ಬರಬಹುದು ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.