ತಾಯಿಯ ಪ್ರಾಣ ಉಳಿಸಿದ ಬಾಲಕನಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ

120

ಪ್ರಜಾಸ್ತ್ರ ಸುದ್ದಿ

ಕೊಡಗು: ಹಿಟ್ಟಿನ ಗಿರಣಿಯ ಬೆಲ್ಟ್ ಗೆ ಆಕಸ್ಮಿಕವಾಗಿ ಸಿಲುಕಿಹಾಕಿಂಡಿದ್ದ ತಾಯಿಯ ಪ್ರಾಣ ಉಳಿಸಿದ ಬಾಲಕನಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ನೀಡಲಾಗುತ್ತಿದೆ. ಈ ಕುರಿತು 3ನೇ ತರಗತಿ ವಿದ್ಯಾರ್ಥಿ ದೀಕ್ಷಿತ್ ಹೆತ್ತವರು ತಿಳಿಸಿದ್ದಾರೆ.

ದೀಕ್ಷಿತ್ ತಾಯಿ ಅರ್ಪಿತಾ ಕಳೆದ ನವೆಂಬರ್ 24, 2022ರಲ್ಲಿ ಹಿಟ್ಟಿನ ಗಿರಣಿಯಲ್ಲಿ ಅಕ್ಕಿಪುಡಿ ಮಾಡಿಸುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಅವರ ತಲೆ ಗಿರಣಿಯ ಬೆಲ್ಟ್ ಗೆ ಸಿಲುಕಿಕೊಂಡಿದೆ. ಆಗ ಅವರು ಕೂಗಿಕೊಂಡಿದ್ದಾರೆ. ಇದನ್ನು ಕೇಳಿ ಓಡಿ ಬಂದ ಬಾಲಕ ವಿದ್ಯುತ್ ಸರಬರಾಜು ಆಗುತ್ತಿದ್ದ ಸಂಪರ್ಕ ಬಂದ್ ಮಾಡಿ ತಾಯಿಯ ಪ್ರಾಣ ಉಳಿಸಿದ.

ಬಾಲಕನ ಸಮಯಪ್ರಜ್ಞೆ, ಆತನ ಧೈರ್ಯಕ್ಕೆ ಇದೀಗ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಒಲಿದಿದ್ದು, ಜನವರಿ 26ರಂದು ಗಣರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 2022-23ನೇ ಸಾಲಿನ ಪ್ರಶಸ್ತಿ ಪಡೆಯಲಿದ್ದಾನೆ.




Leave a Reply

Your email address will not be published. Required fields are marked *

error: Content is protected !!