ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ: ಕರೋನಾ ಸೋಂಕು ಅತಿಯಾಗ್ತಿದೆ. ಸಾಯುವವರ ಸಂಖ್ಯೆ ಕೂಡ ಹೆಚ್ಚಾಗ್ತಿದೆ ಅನ್ನೋ ಭಯ ಜನರಲ್ಲಿ ಇಲ್ಲವೇ ಇಲ್ಲ. ಸರ್ಕಾರದ ವಿರುದ್ಧ, ವ್ಯವಸ್ಥೆಯ ವಿರುದ್ಧ ಒಂದ್ಕಡೆ ಆಕ್ರೋಶ ವ್ಯಕ್ತವಾಗ್ತಿದೆ. ಇನ್ನೊಂದ್ಕಡೆ ಜನರು ಕೋವಿಡ್ ಭಯವಿಲ್ಲದೆ ಸಾವಿರಾರು ಜನರು ಓಡಾಡ್ತಿದ್ದಾರೆ.
ನಗರದಲ್ಲಿ ಜನರು ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಹೊರಗೆ ಬಂದವರು ಮಧ್ಯಾಹ್ನವಾದ್ರೂ ಸುತ್ತಾಡುತ್ತಲೇ ಇದ್ದಾರೆ. ಅಮರಗೋಳದ ಎಪಿಎಂಸಿ, ಅಕ್ಕಿಹೊಂಡ, ಮರಾಠ ಗಲ್ಲಿ, ರೈಲ್ವೆ ಸ್ಟೇಷನ್ ರಸ್ತೆ ಸೇರಿದಂತೆ ಎಲ್ಲ ಮಾರುಕಟ್ಟೆಗಳು ಜನ ಜಂಗುಳಿಯಿಂದ ತುಂಬಿದೆ.
ಕಾರ್, ಬೈಕ್ ಸವಾರರ ಸಂಖ್ಯೆ ಕೂಡಾ ಜೋರಾಗಿದೆ. ಇದ್ರಿಂದಾಗಿ ಟ್ರಾಫಿಕ್ ಸಮಸ್ಯೆಯಾಗ್ತಿದೆ. ಸಾಮಾಜಿಕ ಅಂತರ ಅಂದರೆ ಏನು ಅನ್ನೋ ಪ್ರಶ್ನೆ ಮಾಡುವಷ್ಟರ ಮಟ್ಟಿಗೆ ಜನರ ಓಡಾಟವಿದೆ. ಹೀಗಿದ್ರೆ ಕರೋನಾ ಮುಕ್ತವಾಗಲ್ಲ. ಜನಮುಕ್ತ ಊರುಗಳಾಗಬೇಕಾಗುತ್ತೆ.