ಪ್ರಜಾಸ್ತ್ರ ಸುದ್ದಿ
ನವದೆಹಲಿ: ಕರೋನಾ ಪರಿಸ್ಥಿತಿಯನ್ನ ನಿಯಂತ್ರಿಸಲು ಆಗದಿರುವ ಕೇಂದ್ರದ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಹಾರ ನಡೆಸಿದ್ದಾರೆ. ಪ್ರಧಾನಿಯ ಹೊಸ ಮನೆ(ನೂತನ ಸಂಸತ್ ಭವನ) ನಿರ್ಮಿಸುವುದನ್ನ ನಿಲ್ಲಿಸಿ, ಅದರ ಹಣವನ್ನ ಕೋವಿಡ್ ನಿರ್ವಹಣೆಗೆ ಬಳಲು ಸೂಚಿಸಿದ್ದಾರೆ.
13,450 ಕೋಟಿ ರೂಪಾಯಿ ನೂತನ ಸಂಸತ್ ಭವನ ನಿರ್ಮಾಣಕ್ಕೆ ಬಳಸಲಾಗ್ತಿದ್ದು, ಡಿಸೆಂಬರ್ 2022ರ ಒಳಗೆ ಮುಗಿಸಲು ಡೆಡ್ ಲೈನ್ ನೀಡಲಾಗಿದೆ. ಇದನ್ನು ಮೊದಲು ನಿಲ್ಲಿಸಿ, ಆ ಹಣವನ್ನ ಆಕ್ಸಿಜನ್, ವ್ಯಾಕ್ಸಿನ್, ಬೆಡ್, ಮೆಡಿಸನ್ ಸೇರಿದಂತೆ ಕೋವಿಡ್ ರೋಗಿಗಳನ್ನ ಉಳಿಸಲು ಬಳಿಸಿ ಎಂದು ಆಗ್ರಹಿಸಿದ್ದಾರೆ.