ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

220

ಪ್ರಜಾಸ್ತ್ರ ಸುದ್ದಿ

ಉಳ್ಳಾಲ: ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ತೀವ್ರಅಸ್ಥವಸ್ತಗೊಂಡಿದ್ದ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಭಾನುವಾರ ಮೃತಪಟ್ಟಿದ್ದಾಳೆ. ಕಂಪಲದ 17 ವರ್ಷದ ವಿದ್ಯಾರ್ಥಿ ಧನ್ಯಾ ಮೃತ ದುರ್ದೈವಿ. ಕಳೆದ 14ರಂದು ಮಧ್ಯಾಹ್ನ ಕೀಟನಾಶಕ ಸೇವಿಸಿದ್ದಳು. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

ನಗರದ ರಾಮಕೃಷ್ಣ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಧನ್ಯಾ, ರಜೆಯಲ್ಲಿದ್ದಳು. ಫೆಬ್ರವರಿ 14ರಂದು ಮನೆಯಲ್ಲಿರದೆ ಮಧ್ಯಾಹ್ನ 3ಗಂಟೆಗೆ ಮನೆಗೆ ಬಂದಿದ್ದಳು. ಇಷ್ಟೊತ್ತು ಎಲ್ಲಿಗೆ ಹೋಗಿದ್ದೆ ಎಂದು ತಾಯಿ ಒಂದಿಷ್ಟು ಬೈದಿದ್ದಾಳೆ. ನಂತರ ಅವರು ಪಕ್ಕದ ಮನೆಗೆ ಹೋದ ಸಂದರ್ಭದಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಕುಂಪಲ ಆಶ್ರಯ ಕಾಲೋನಿಯ ನಿವಾಸಿಯಾಗಿರುವ ಸೋಮನಾಥ್ ಹಾಗೂ ಭವ್ಯಾ ಅವರ ಪುತ್ರಿ, ಕ್ಷುಲ್ಲಕ ಕಾರಣಕ್ಕೆ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ. ಇದೀಗ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.




Leave a Reply

Your email address will not be published. Required fields are marked *

error: Content is protected !!