ಪ್ರಜಾಸ್ತ್ರ ಸುದ್ದಿ
ಸಿಂದಗಿ: ರಾಜ್ಯದೆಲ್ಲೆಡೆ ಮಳೆಯ ಆರ್ಭಟ ಜೋರಾಗಿದೆ. ಅದೇ ರೀತಿ ತಾಲೂಕಿನಾದ್ಯಂತ ಕಳೆದ ಎರಡ್ಮೂರು ದಿನಗಳಿಂದ ಭರ್ಜರಿ ಮಳೆಯಾಗುತ್ತಿದೆ. ಹೀಗಾಗಿ ಇಷ್ಟು ದಿನ ಬೇಸಿಗೆ ಬಿಸಿಲಿಗೆ ಬೆಂಡಾಗಿದ್ದ ಜನತೆಗೆ ಖುಷಿಯಾಗಿದೆ.
ಗುರುವಾರ ಇಡೀ ದಿನ ಮಳೆಯದ್ದೇ ಕಾರುಬಾರು. ಆಗಾಗ ಮಳೆ ಸುರಿಯುತ್ತಲೇ ಇದೆ. ಹೀಗಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. ವ್ಯಾಪಾರ ವಹಿವಾಟು ಕುಂಠಿತವಾಗಿದೆ. ಅನೇಕ ಕಡೆ ಮಳೆ ನೀರು ಹರಿದು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.