ಬ್ರೇಕಿಂಗ್ ನ್ಯೂಸ್
Search

ತ್ರಿಪದಿ ಬ್ರಹ್ಮ ಸರ್ವಜ್ಞ ಜಯಂತಿ

262

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕು ಆಡಳಿತ ಸೌಧದ ಕಚೇರಿಯಲ್ಲಿ ಮಹಾನ್ ಸಂತ ಸರ್ವಜ್ಞ ಜಯಂತಿಯನ್ನು, ಸರ್ಕಾರದ ನಿಯಮದಂತೆ ಸರಳವಾಗಿ ಆಚರಿಸಲಾಯಿತು. ತಹಶೀಲ್ದಾರ್ ನಿಂಗಣ್ಣ ಬಿರಾದಾರ ಹಾಗೂ ಇತರರು ಫೋಟೋ ಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ತಹಶೀಲ್ದಾರ್ ನಿಂಗಣ್ಣ ಬಿರಾದಾರ, ಸರ್ವಜ್ಞ ಒಬ್ಬರು ಕಾಲಜ್ಞಾನಿ. ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಅವರ ತ್ರಿಪದಿಗಳು ಮುಂಚೂಣಿಯಲ್ಲಿವೆ. ಹೀಗಾಗಿಯೇ ಅವರನ್ನು ತ್ರಿಪದಿ ಬ್ರಹ್ಮ ಎಂದು ಕರೆಯಲಾಗುತ್ತೆ. ಅವರಾಡಿದ ಪ್ರತಿಯೊಂದು ಮಾತುಗಳು ಎಲ್ಲ ಕಾಲಕ್ಕೂ ಪ್ರಸ್ತುತವೆಂದು ಹೇಳಿದರು.

ಈ ವೇಳೆ ಶಿರಸ್ತೆದಾರ ಸಿ.ಬಿ.ಬಾಬಾನಗರ, ಕಂದಾಯ ನೀರಿಕ್ಷಕ ಆಯ್.ಎ.ಮಕಾನದಾರ, ಚೇತನ ಭೋಸಗಿ, ಕೀರ್ತಿ ಅಗ್ನಿಹೋತ್ರಿ, ಜಿ.ಎಸ್.ಸೋಮನಾಯಕ, ರಾಮಪ್ಪ ರಾಂಪೂರ, ವಿನೋದ ಕರನಾಳ, ಸಮಾಜದ ಅಧ್ಯಕ್ಷರಾದ ಶ್ರೀಶೈಲ ಕುಂಬಾರ, ಸಿದ್ದಪ್ಪ ಕುಂಬಾರ, ನೀಲಪ್ಪ ಕುಂಬಾರ, ಸದಾನಂದ ಕುಂಬಾರ, ಶಾಂತು ಕುಂಬಾರ, ಸಂಗಮೇಶ ಕುಂಬಾರ ಸೇರಿ ಅನೇಕರು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!