ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ಸೂಪರ್ ಸ್ಟಾರ್, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಅವರು ಗೌರಿ ಗಣೇಶ ಹಬ್ಬದ ಪ್ರಯುಕ್ತ ಇಂದು ಪಾರ್ವತಿ ಅನ್ನೋ ಆನೆಯನ್ನ ದತ್ತು ಪಡೆದಿದ್ದಾರೆ. 75 ಸಾವಿರ ರೂಪಾಯಿ ಪಾವತಿಸಿ ಒಂದು ವರ್ಷಕ್ಕೆ ದತ್ತು ಪಡೆದುಕೊಂಡಿದ್ದಾರೆ.
ಈ ಬಗ್ಗೆ ಖುದ್ದು ಮೈಸೂರು ಮೃಗಾಲಯದ ಆಡಳಿತ ಮಂಡಳಿ ತಿಳಿಸಿದೆ. ಆಗಸ್ಟ್ 20, 2020ರಿಂದ ಆಗಸ್ಟ್ 19, 2021ರವರೆಗೂ ಪಾರ್ವತಿ ಆನೆಯನ್ನ ದತ್ತು ಪಡೆದಿದ್ದಕ್ಕೆ ಧನ್ಯವಾದಗಳನ್ನ ತಿಳಿಸಲಾಗಿದೆ. ಈ ಮೊದಲು ಸಿಎಂ ಆಗಿದ್ದ ಸಿದ್ದರಾಮಯ್ಯನವರು ಐರಾವತಿ ಅನ್ನೋ ಆನೆ ಜನ್ಮ ನೀಡಿದ ಮರಿಗೆ ಪಾರ್ವತಿ ಎಂದು ಹೆಸರು ಇಡಲಾಗಿತ್ತು ಎಂದು ಹೇಳಲಾಗ್ತಿದೆ.