ಪಕ್ಷಾಂತರ ಶಾಸಕರ ಬಗ್ಗೆ ಕೈ ನಾಯಕರ ತದ್ವಿರುದ್ಧ ಹೇಳಿಕೆ

243

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಶಾಸಕರು ವಾಪಸ್ ಬಂದ್ರೆ ವಾಪಸ್ ಕರೆದುಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಹೇಳಿದ್ದಾರೆ. ಆದ್ರೆ, ಇದಕ್ಕೆ ತದ್ವಿರುದ್ಧವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಡಿ.ಕೆ ಶಿವಕುಮಾರ ಹೇಳಿದ್ದು, ಯಾರಬೇಕಾದ್ರೂ ಕಾಂಗ್ರೆಸ್ ಪಕ್ಷಕ್ಕೆ ಬರಬಹುದು ಎಂದಿದ್ದಾರೆ. ಬಿಟ್ಟು ಹೋದ 14 ಜನರ ಬಗ್ಗೆ ಹೇಳಿಲ್ಲ. ಪಕ್ಷಕ್ಕೆ ಮೋಸ ಮಾಡಿದ 14 ಜನ ಶಾಸಕರನ್ನ ಸೇರಿಸಿಕೊಳ್ಳುವುದಿಲ್ಲ. ಪ್ರಳಯವಾದ್ರೂ ಸೇರಿಸಿಕೊಳ್ಳುವುದಿಲ್ಲ ಎಂದು ಈ ಹಿಂದೆ ಸದನದಲ್ಲಿ ಸಹ ಹೇಳಿದ್ದೇನೆ ಅಂತಾ ಹೇಳಿದ್ರು.

ಡಿ.ಕೆ ಶಿವಕುಮಾರ ಹಾಗೂ ಸಿದ್ದರಾಮಯ್ಯನವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಒಂದಿಷ್ಟು ಚರ್ಚೆಯಾಗ್ತಿದೆ. ಒಬ್ಬರೊಂದು ಒಬ್ಬರು ಹೇಳಿಕೆ ನೀಡ್ತಿದ್ದು, ಕೈ ನಾಯಕರ ನಡುವೆ ತಿಕ್ಕಾಟ ನಡೆದಿದೆ ಎಂದು ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!