ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಕೆಕೆ ಎಂದೇ ಖ್ಯಾತಿ ಹೊಂದಿದ್ದ ಗಾಯಕ ಕೃಷ್ಣಕುಮಾರ್ ಕುನ್ನತ್(53) ವೇದಿಕೆ ಮೇಲೆಯೇ ಅಸುನೀಗಿದ್ದಾರೆ. ಕಳೆದ ರಾತ್ರಿ, ಕೊಲ್ಕತ್ತಾದ ನಜ್ರುಲ್ ಮಂಚ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಡುತ್ತಿದ್ದರು. ಹಾಡುವಾಗಲೇ ಅಸ್ವಸ್ಥರಾಗಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಠಾಕೂರ್ಪೂಕೂರ್ ವಿವೇಕಾನಂದ ಕಾಲೇಜು ಆಯೋಜನೆ ಮಾಡಿದ್ದ ಉತ್ಸವದಲ್ಲಿ ಭಾಗವಹಿಸಿದ್ದರು. ಅವರು ಹೋಟೆಲ್ ಗೆ ಬರುವಾಗಲೇ ಸುಸ್ತಾದವರಂತೆ ಕಂಡಿದ್ದರಂತೆ. ಆದರೆ, ಅಲ್ಲಿಂದ ಕಾರ್ಯಕ್ರಮಕ್ಕೆ ಹೋಗಿ ಒಂದು ಗಂಟೆಗಳ ಕಾಲ ಹಾಡು ಹಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕನ್ನಡ ಸೇರಿದಂತೆ ತಮಿಳು, ಹಿಂದಿ, ಮರಾಠಿ, ಬೆಂಗಾಳಿ, ಆಸ್ಸಾಮಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಹಾಡಿದ್ದಾರೆ. ಪ್ರಧಾನಿ ಮೋದಿ, ಮಾಜಿ ಕ್ರಿಕೆಟ್ ಆಟಗಾರ ವೀರೇಂದ್ರ ಸೆಹ್ವಾಗ್ ಸೇರಿದಂತೆ ಸಂಗೀತ ಲೋಕದ ಗಣ್ಯರು ಸೇರಿ ಅನೇಕರು ಕಂಬನಿ ಮಿಡಿದಿದ್ದಾರೆ.