ಪ್ರಜಾಸ್ತ್ರ ಸುದ್ದಿ
ಬರೇಲಿ: ಉತ್ತರ ಪ್ರದೇಶದ ಯೋಗಿ ಆದಿಥ್ಯನಾಥ್ ಸರ್ಕಾರದ ವಿರುದ್ಧ ಪ್ರಚೋದನಕಾರಿ ಹೇಳಿಕೆಯೊಂದನ್ನು ಕಳೆದ ಶುಕ್ರವಾರ ನೀಡಿದ್ದ ಸಮಾಜವಾದಿ ಶಾಸಕ ಶಾಜಿಲ್ ಇಸ್ಲಾಂ ಅನ್ಸಾರಿಗೆ ಸೇರಿದ ಪೆಟ್ರೋಲ್ ಪಂಪ್ ನಾಶಗೊಳಿಸಲಾಗಿದೆ. ಇದು ಸಾಕಷ್ಟು ಅನುಮಾನ ಮೂಡಿದೆ.
ಆದರೆ, ಬರೇಲಿ-ದೆಹಲಿ ರಾಷ್ಟ್ರೀಯ ಹೆದ್ದಾರಿಯಾದ ಪರ್ಸಖೇಡಾದಲ್ಲಿ ಅನ್ಸಾರಿ ಪೆಟ್ರೋಲ್ ಪಂಪ್ ಇದೆ. ಇದು ಅಕ್ರಮವೆಂದು ಹೇಳಿ ಬರೇಲಿ ಅಭಿವೃದ್ಧಿ ಪ್ರಾಧಿಕಾರ ಗುರುವಾರ ನಾಶಗೊಳಿಸಿದೆ. ಈ ಮೊದಲು ನೋಟಿಸ್ ನೀಡಲಾಗಿದೆ. ಉತ್ತರ ಬಂದಿಲ್ಲ. ಅದಕ್ಕಾಗಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ಶುಕ್ರವಾರ ತಮ್ಮ ಕ್ಷೇತ್ರದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದ ಶಾಸಕ ಶಾಜಿಲ್ ಇಸ್ಲಾಂ ಅನ್ಸಾರಿ, ವಿಧಾನಸಭೆಯಲ್ಲಿ ನಮ್ಮ ಪಕ್ಷದ ಬಲ ಹೆಚ್ಚಾಗಿದೆ. ಆದಿಥ್ಯನಾಥ್ ಸದ್ದು ಮಾಡಿದರೆ ಎಸ್ಪಿ ಬಂದುಕೂಗಳು ಬರೀ ಹೊಗೆಸೂಸುವುದಿಲ್ಲ ಬುಲೆಟ್ ಹಾರಲಿವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಾದ ವಾರದೊಳಗೆ ಅವರ ಪೆಟ್ರೋಲ್ ಪಂಪ್ ನಾಶಗೊಳಿಸಲಾಗಿದ್ದು, ಸಾಕಷ್ಟು ಅನುಮಾನ ಮೂಡಿಸಿದೆ.