ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ಸಿಂದಗಿ: ಹಿರಿಯ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ 73ನೇ ಜನ್ಮ ದಿನಾಚರಣೆ ನಿಮಿತ್ತ, ಪಟ್ಟಣದಲ್ಲಿ ಬುಧವಾರ ಸಂಜೆ 6.30ಕ್ಕೆ ‘ತೇಜಸ್ವಿ ನೆನಪಿನಲ್ಲಿ’ ಅನ್ನೋ ಕಾರ್ಯಕ್ರಮ ನಡೆಸಲಾಯಿತು.
ತಾಲೂಕು ಸಾಹಿತ್ಯ ಪರಿಷತ್, ಮಕ್ಕಳ ಸಾಹಿತ್ಯ ಪರಿಷತ್, ಪ್ರಜಾಸ್ತ್ರ ವೆಬ್ ಪತ್ರಿಕೆ ಹಾಗೂ ರಾಗ ರಂಜನಿ ಸಂಗೀತ ಅಕಾಡಮಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಕಸಾಪ ಅಧ್ಯಕ್ಷ ಸಿದ್ಧಲಿಂಗ ಚೌದರಿ, ಮಾಸಾಪ ಅಧ್ಯಕ್ಷ ಅಶೋಕ ಬಿರಾದಾರ, ಪ್ರಜಾಸ್ತ್ರ ವೆಬ್ ಪತ್ರಿಕೆ ಸಂಪಾದಕ ನಾಗೇಶ ತಳವಾರ, ಶಿಕ್ಷಕಿ ಜೆ.ಸಿ ನಂದಿಕೋಲ ಸೇರಿದಂತೆ ಇತರರು ತೇಜಸ್ವಿ ಸಾಹಿತ್ಯ ಹಾಗೂ ಅವರ ಜೀವನ ಶೈಲಿ ಕುರಿತು ಅಭಿಪ್ರಾಯ ಹಂಚಿಕೊಂಡರು.
ಇದೇ ವೇಳೆ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಸದಸ್ಯರು, ಕಾನಿಪ ಅಧ್ಯಕ್ಷ ಆನಂದ ಶಾಬಾದಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ರಾಜಶೇಖರ ಶೆಟ್ಟಿ, ಮುತ್ತು ಬ್ಯಾಕೋಡ, ಬಸವರಾಜ ಅಗಸರ, ಶಿವಾನಂದ ಶಾಹಪೂರ, ಶಿವಕುಮಾರ ಕಲ್ಲೂರ, ಸಾಯಬಣ್ಣ ದೇವರಮನಿ, ಸುಮಂಗಲಾ ಕೆಂಬಾವಿ, ಸೈನಬ ಮಸಳಿ, ಮಾದೇವಿ ಹೆರವಾ, ಕಾಂಚನಾ ಆರ್.ಎಸ್ ಪಾಟೀಲ, ಸಿ.ಎನ್ ಶರಕನಳ್ಳಿ, ಎಂ.ಕೆ ಬಿರಾದಾರ ಸೇರಿ ಅನೇಕರು ಭಾಗವಹಿಸಿದ್ದರು.