ಪ್ರಜಾಸ್ತ್ರ ಅಪರಾಧ ಸುದ್ದಿ
ಸಿಂದಗಿ: ಪಟ್ಟಣದಲ್ಲಿನ ಸಾಯಿ ಮಂದಿರದಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಸೋಮವಾರ ತಡರಾತ್ರಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಹುಂಡಿ ಕಳ್ಳತನ ಮಾಡಿದ್ದಾರೆ. ಸುಮಾರು 30 ಸಾವಿರ ರೂಪಾಯಿ ಕಳ್ಳತನವಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು ದೇವಸ್ಥಾನದೊಳಗಿನ ತಿಜೋರಿ ಸಹ ಒಡೆದು ಹೋಗಿದ್ದಾರಂತೆ. ಕೆಲ ವರ್ಷಗಳ ಹಿಂದೆಯೂ ಇದೆ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಆದರೆ, ಇದುವರೆಗೂ ಕಳ್ಳರನ್ನು ಹಿಡಿದಿಲ್ಲ ಎಂದು ಅರ್ಚಕ ಬಮ್ಮಲಿಂಗಯ್ಯ ಚಿಕ್ಕಮಠ ಹೇಳುತ್ತಿದ್ದಾರೆ. ಈಗ ಮತ್ತೆ ಕಳ್ಳತನ ನಡೆದಿದ್ದು, ಈ ಕುರಿತು ದೂರು ನೀಡುತ್ತೇವೆ ಎಂದಿದ್ದಾರೆ.
ಪಟ್ಟಣದಲ್ಲಿ ಆಗಾಗಾ ಕಳ್ಳತನ ಪ್ರಕರಣಗಳು ನಡೆಯುತ್ತಲೇ ಇವೆ. ಮನೆ, ಮೊಬೈಲ್ ಅಂಗಡಿ, ಪಾನ್ ಶಾಪ್ ಅಂಗಡಿ ಹೀಗೆ ಒಂದಲ್ಲ ಒಂದು ಕಳ್ಳತನ ಪ್ರಕರಣ ನಡೆಯುತ್ತಿದ್ದರೂ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.