ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮಕ್ಕಳು ಹಠ ಮಾಡುತ್ತಾರೆ ಎಂದು ಹೇಳಿದ 2ನೇ ಹೆಂಡ್ತಿ ಮಾತು ಕೇಳಿ, ತನ್ನ ಮೂರು ಮಕ್ಕಳಿಗೆ ಚಿತ್ರಹಿಂಸೆ ನೀಡಿದ ತಂದೆಯನ್ನ ಬಂಧಿಸಲಾಗಿದೆ. ಮಕ್ಕಳಿಗೆ ಸಾಕಷ್ಟು ಹೊಡೆದು ಮುಖ, ಕೈ, ಕಾಲು, ಭುಜಕ್ಕೆ ಗಾಯ ಮಾಡಿದ್ದು ಅಲ್ಲದೇ, ಚಾಕುವಿನಿಂದ ಬರೆ ಎಳೆದಿದಿದ್ದ ಸೆಲ್ವರಾಜನನ್ನ ಬಂಧಿಸಲಾಗಿದೆ.
ಮೂರು ತಿಂಗಳ ಹಿಂದೆ ಮೊದಲ ಹೆಂಡ್ತಿ ಮೃತಪಟ್ಟಿದ್ದಾಳೆ. ಎರಡನೇ ಮದುವೆಯಾಗಿದ್ದ. ಮೊದಲ ಹೆಂಡ್ತಿಯ ಮೂರು ಮಕ್ಕಳ ಮೇಲೆ ಮಲತಾಯಿ ತನ್ನ ಬುದ್ದಿ ತೋರಿಸಿದ್ದಾಳೆ. ಇತ್ತ ತಂದೆಯಾದವನು ಆಕೆ ಮಾತು ಕೇಳಿ ಮಕ್ಕಳ ಮೇಲೆ ಕ್ರೌರ್ಯ ಮೆರೆದಿದ್ದಾನೆ. ಹೀಗಾಗಿ ಮಕ್ಕಳು ಮನೆಯಿಂದ ಹೊರಗೆ ಓಡಿ ಬಂದಿದ್ದು, ನೆರೆಹೊರೆಯವರು ರಕ್ಷಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಜೆಪಿ ನಗರ ಠಾಣೆ ಪೊಲೀಸರು ಪಾಪಿ ತಂದೆಯನ್ನ ಬಂಧಿಸಿದ್ದಾರೆ. ಮಕ್ಕಳನ್ನ ಬಾಲಭವನದ ಆಶ್ರಯದಲ್ಲಿ ಬಿಡಲಾಗಿದೆ.