ಪ್ರಜಾಸ್ತ್ರ ಅಪರಾಧ ಸುದ್ದಿ
ರಾಮನಗರ: ಕ್ಷುಲ್ಲಕ ಕಾರಣಕ್ಕೆ ಗೆಳೆಯನಿಗೆ ಇರಿದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನಲ್ಲಿ ನಡೆದಿದೆ. ಸಯ್ಯದ ವಾಡಿ ನಿವಾಸಿ 25 ವರ್ಷದ ರಾಹಿಬ್ ಪಾಷಾ ಕೊಲೆಯಾದ ದುರ್ದೈವಿಯಾಗಿದ್ದಾನೆ.
ಹತ್ಯೆ ಪ್ರಕರಣ ಸಂಬಂಧ ಟಿಪ್ಪು ನಗರ ನಿವಾಸಿಗಳಾದ ಜುಬೇರ್, ವಲಿ ಮತ್ತು ಮುನೀರ್ ಅನ್ನೋ ಮೂವರನ್ನ ಪೊಲೀಸರು ಬಂಧಿಸಿದ್ದಾರೆ. ಸಾತನೂರು ರಸ್ತೆ ಕಣ್ವ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಕಾರಣವೇನು ಅನ್ನೋದು ತಿಳಿದು ಬಂದಿಲ್ಲ.
ಆರೋಪಿಗಳ ವಿರುದ್ಧ ಐಪಿಸಿ 302, 34 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗ್ತಿದೆ. ಈ ಘಟನೆ ನಡೆದ ಕೆಲ ಘಂಟೆಗಲ್ಲಿಯೇ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.