ಕೊನೆಗೂ ಅಡ್ವಾನಿ, ಜೋಶಿಗೆ ಆಹ್ವಾನ ನೀಡಿದ ವಿಹೆಚ್ ಪಿ

159

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಜನವರಿ 22ರಂದು ನಡೆಯುವ ಅಯೋಧ್ಯೆ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ಉಪ ಪ್ರಧಾನಿ, ರಾಮ ಮಂದಿರಕ್ಕಾಗಿ ಹೋರಾಡಿ ಕೋರ್ಟ್, ಕಚೇರಿ ಎಂದು ಅಲೆದಾಡಿದ ಹಿರಿಯ ಬಿಜೆಪಿ ನಾಯಕ ಎಲ್.ಕೆ ಅಡ್ವಾನಿ ಹಾಗೂ ಆರ್ ಎಸ್ಎಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಮುರುಳಿ ಮನೋಹರ್ ಜೋಶಿಗೆ ಕೊನೆಗೂ ಆಹ್ವಾನ ನೀಡಲಾಗಿದೆ.

ವಿಹೆಚ್ ಪಿ ಮುಖ್ಯಸ್ಥ ಅಲೋಕ್ ಕುಮಾರ್, ಆರ್ ಎಸ್ಎಸ್ ಹಿರಿಯ ನಾಯಕರಾದ ರಾಮಲಾಲ್ ಹಾಗೂ ಕೃಷ್ಣ ಗೋಪಾಲ್ ಅವರು ಅಧಿಕೃತ ಆಹ್ವಾನ ನೀಡಿದ್ದಾರೆ. ಇದಕ್ಕೂ ಮೊದಲು ಈ ಇಬ್ಬರು ಹಿರಿಯ ನಾಯಕರಿಗೆ ವಯಸ್ಸಿನ ಕಾರಣಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಮನವಿ ಮಾಡಿಕೊಳ್ಳಲಾಗಿತ್ತು. ಇದು ಸಾಕಷ್ಟು ಚರ್ಚೆ, ವಿರೋಧಕ್ಕೆ ಕಾರಣವಾಯಿತು.

ಈ ಇಬ್ಬರು ನಾಯಕರಿಗೆ ಆಹ್ವಾನ ನೀಡಲಾಗಿದೆ. ಅವರು ಬರುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರಂತೆ. ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮ ಮಂದಿರ ಜನವರಿ 22ರಂದು  ಉದ್ಘಾಟನೆಯಾಗಲಿದೆ.




Leave a Reply

Your email address will not be published. Required fields are marked *

error: Content is protected !!