ಕೋವಿಡ್ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾದ ದಂಪತಿ

257

ಪ್ರಜಾಸ್ತ್ರ ಸುದ್ದಿ

ಮಂಗಳೂರು: ಕೋವಿಡ್ ಲಾಕ್ ಡೌನ್, ಸೋಂಕಿನ ಭಯ, ಬ್ಲಾಕ್ ಫಂಗಸ್ ಟೆನ್ಷನ್, ಮಕ್ಕಳಿಲ್ಲದ ಖಿನ್ನತೆ ಸೇರಿದಂತೆ ಸಾಕಷ್ಟು ವಿಚಾರಗಳಿಂದ ನೊಂದ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮೊದ್ಲು ಪೊಲೀಸ್ ಆಯುಕ್ತರಿಗೆ ಫೋನ್ ಮಾಡಿ ತಾವು ಸಾಯುವ ವಿಚಾರ ತಿಳಿಸಿ ಫೋನ್ ಕಟ್ ಮಾಡಿದ್ದಾರೆ.

ಮಂಗಳವಾರ ಬೆಳಗ್ಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರಿಗೆ ಫೋನ್ ಮಾಡಿ ಆತ್ಮಹತ್ಯೆ ಬಗ್ಗೆ ಹೇಳಿದ್ದಾರೆ. ಆಯುಕ್ತರು ವಾಪಸ್ ಫೋನ್ ಮಾಡಿದರೆ ರಿಸೀವ್ ಮಾಡಿಲ್ಲ. ಸಂಬಂಧಿಸಿದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಫೋನ್ ಲೋಕೇಷನ್ ಟ್ರೇಸ್ ಮಾಡಲಾಗಿದೆ. ಪ್ಲಾಟ್ ಗೆ ಹೋಗಿ ಬಾಗಿಲು ಮುರಿದು ನೋಡಿದ್ರೆ ದಂಪತಿ ಆತ್ಮಹತ್ಯೆಗೆ ಶರಣಾಗಿರುವುದು ಕಂಡು ಬಂದಿದೆ.

ಇನ್ನು ದಂಪತಿ ಡೆತ್ ನೋಟ್ ಬರೆದಿಟ್ಟಿದ್ದು, ತಮಗೆ ಕರೋನಾ ಸೋಂಕು ತಗುಲಿದೆ. ಬಳಿಕ ಎದುರಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇವು. ಮಕ್ಕಳು ಪಡೆಯಲು ಯತ್ನಿಸಿದ್ರೂ ಅನಾರೋಗ್ಯದಿಂದ ಸಾಧ್ಯವಾಗ್ಲಿಲ್ಲ. ಹೀಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ ಎಂದು ಸುದೀರ್ಘ ಪತ್ರ ಬರೆದಿದ್ದಾರೆ. ತಮ್ಮ ಅಂತ್ಯಕ್ರಿಗೆ 1 ಲಕ್ಷ ರೂಪಾಯಿ ಇದೆ. ಅದನ್ನ ಬಳಸಿ. ಮನೆಯಲ್ಲಿನ ವಸ್ತುಗಳನ್ನ ಮಾರಾಟ ಮಾಡಿ ಬಡವರಿಗೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!