ಪ್ರಜಾಸ್ತ್ರ ಕ್ರೀಡಾ ಸುದ್ದಿ
ಏಷ್ಯ ಕಪ್ 2023 ಟೂರ್ನಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದೆ. ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್ ಅವರಿಗೆ ಸ್ಥಾನ ಸಿಕ್ಕಿದೆ. ತಿಲಕ್ ವರ್ಮಾಗೆ ಅವಕಾಶ ಸಿಕ್ಕಿದೆ. ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಯಜುವೇಂದ್ರ ಚಹಲ್ ಕೈ ಬಿಡಲಾಗಿದೆ. ಈ ಬಗ್ಗೆ ಅನೇಕ ಕ್ರಿಕೆಟ್ ಪಂಡಿತರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಚಹಲ್ ಪತ್ನಿ ಧನ್ಯಶ್ರೀ ಮಾಡಿದ ಪೋಸ್ಟ್ ವೈರಲ್ ಆಗಿದೆ.
ದೇವರು ದೊಡ್ಡವನು ಅದೃಷ್ಟವಶಾತ್ ಜಗತ್ತು ನಿಮ್ಮೊಂದಿಗಿದೆ. ತುಂಬಾ ವಿಧೇಯರಾಗಿರುವುದು ಕೆಲಸದಲ್ಲಿನ ಬೆಳವಣಿಗೆಗೆ ಅಡಚಣಿಯೇ ಅಥವ ಜೀವನದಲ್ಲಿ ನಾವು ಮುಂದೆ ಬರಲು ಚತುರರಾಗಿರಬೇಕು ಎಂದು ಪ್ರಶ್ನಿಸಿದ್ದಾರೆ. ಇದು ನೇರವಾಗಿ ಬಿಸಿಸಿಐಗೆ ಕೇಳಿದ ಪ್ರಶ್ನೆ ಎನ್ನಲಾಗುತ್ತಿದೆ.