ಪ್ರಜಾಸ್ತ್ರ ಅಪರಾಧ ಸುದ್ದಿ
ಲಖನೌ: ನಿಜಕ್ಕೂ ಇದೊಂದು ಅತ್ಯಂತ ವಿಕೃತ ಕೃತ್ಯ. 13 ವರ್ಷದ ಬಾಲಕಿಯನ್ನ ಅತ್ಯಾಚಾರ ಮಾಡಿರುವ ಕ್ರೂರಕಾಮಿಗಳು, ಅಮಾನುಷವಾಗಿ ಹತ್ಯೆ ಮಾಡಿದ್ದಾರೆ. ಉತ್ತರ ಪ್ರದೇಶದ ಖೇರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಾಲಕಿಯ ಮೃತದೇಹ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದೆ.
ಮನುಷ್ಯರೂಪದ ರಾಕ್ಷಸರು ಇಂಥಾ ಕೆಲಸ ಮಾಡಲು ಸಾಧ್ಯ. ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿರುವ ದುರುಳರು, ಕತ್ತು ಹಿಸುಕಿ, ಕಣ್ಣುಗಳನ್ನ ಕಿತ್ತು, ನಾಲಿಗೆ ಕೊಯ್ದು ಕೊಲೆ ಮಾಡಿದ್ದಾರೆ ಎನ್ನುವ ತಂದೆಯ ಮಾತು ಕೇಳಿದ್ರೆ, ಒಂದು ಕ್ಷಣ ಎದೆ ಝಲ್ ಎನ್ನುತ್ತೆ. ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ.
ಈ ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅತ್ಯಾಚಾರ ಹಾಗೂ ಕೊಲೆ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸ್ರು ತಿಳಿಸಿದ್ದಾರೆ. ಈ ಘಟನೆಯನ್ನ ಮಾಜಿ ಸಿಎಂ ಮಾಯಾವತಿ ತೀವ್ರವಾಗಿ ಖಂಡಿಸಿದ್ದಾರೆ.
ರಾಮ ರಾಜ್ಯ ಮಾಡುತ್ತೇವೆ ಎನ್ನುತ್ತಿರುವ ಸಿಎಂ ಯೋಗಿ ರಾಜ್ಯದಲ್ಲಿ ಒಂದಾದ್ಮೇಲೆ ಒಂದು ಘನಘೋರ ಕೃತ್ಯ ನಡೆಯುತ್ತಿವೆ. ಕಳೆದ ವಾರವಷ್ಟೆ 6 ವರ್ಷದ ಬಾಲಕಿಯನ್ನ ಕಿಡ್ನಾಪ್ ಮಾಡಿ ಅತ್ಯಾಚಾರ ಮಾಡಲಾಗಿದೆ. ಆ ಕೂಸು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಇದು ನಡೆದಿದ್ದು ಪಶ್ಚಿಮ ಉತ್ತರ ಪ್ರದೇಶದ ಹಪುರ್ ಜಿಲ್ಲೆಯಲ್ಲಿ. ಬರೀ ಬಾಯಿಯಲ್ಲಿ ಆ ರೀತ ಮಾಡುತ್ತೇವೆ. ಈ ರೀತಿ ಮಾಡುತ್ತೇವೆ ಎಂದು ಹೇಳುವುದಲ್ಲ. ಜನಸಾಮಾನ್ಯರು ನೆಮ್ಮದಿಯ ಜೀವನ ನಡೆಸುವ ಸಮಾಜ ನಿರ್ಮಿಸಬೇಕು. ಇಲ್ದೇ, ಹೋದ್ರೆ ಇಂಥಾ ರಕ್ತಬಿಜಾಸುರರ ಸಂತತಿ ಹೆಚ್ಚಾಗುತ್ತೆ.
ಇನ್ನು ಕರ್ನಾಟಕದ ವಿದ್ಯಾಕಾಶಿ ಧಾರವಾಡದಲ್ಲಿಯೂ ಇಂಥಹದೊಂದು ನೀಚ ಕೃತ್ಯ ನಡೆದಿದೆ. ಇದರ ವಿರುದ್ಧ ಹೋರಾಟ, ಪ್ರತಿಭಟನೆ ನಡೆಯುತ್ತಿದ್ರೂ, ಇಲ್ಲಿನ ಬಿಜೆಪಿ ಸರ್ಕಾರ ಸಹ ತುಟಿಕ್ ಪಿಟಿಕ್ ಎನ್ನುತ್ತಿಲ್ಲ.