ಕೇವಲ ಸಾವಿರ ರೂಪಾಯಿಗಾಗಿ ಸ್ನೇಹಿತರಿಂದಲೇ ಮರ್ಡರ್

349

ಪ್ರಜಾಸ್ತ್ರ ಅಪರಾಧ ಸುದ್ದಿ

ನವದೆಹಲಿ: ಎಲ್ಲದಕ್ಕೂ ಸ್ನೇಹಿತರು ನೆರವಾಗ್ತಾರೆ. ಕುಟುಂಬ ಬಿಟ್ರೆ ಸ್ನೇಹಿತರು ಅನ್ನೋ ಮಾತಿದೆ. ಆದ್ರೆ, ಕೆಲವೊಮ್ಮೆ ಹಣದ ಮುಂದೆ ಯಾರೂ ಅಲ್ಲ ಅನ್ನೋ ಘಟನೆಗಳು ನಡೆಯುತ್ತವೆ. ರಾಷ್ಟ್ರ ರಾಜಧಾನಿಯಲ್ಲಿ ಕೊಟ್ಟ ಹಣ ವಾಪಸ್ ಕೇಳಿದಕ್ಕೆ ಸ್ನೇಹಿತರಿಂದಲೇ ಹತ್ಯೆ ನಡೆದಿದೆ.

ಕೇವಲ 19 ವರ್ಷದ ಅಮನ್ ಅನ್ನೋ ಯುವಕ ತನ್ನ ಸ್ನೇಹಿತರಿಂದಲೇ ಕೊಲೆಯಾಗಿದ್ದಾನೆ. ಸಣ್ಣದೊಂದು ಚಪ್ಪಲಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ದ ಅಮನ್ ಗೆ ಆತನ ಇಬ್ಬರು ಸ್ನೇಹಿತರಾದ ಸುಹೈಲ್ ಹಾಗೂ ಫರ್ಹಾನ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಇಬ್ಬರು ಹಂತಕರನ್ನ ಬಂಧಿಸಲಾಗಿದೆ. ಅಷ್ಟಕ್ಕೂ ಯುವಕನ ಜೀವ ಹೋಗಿರುವುದು ಕೇವಲ 1 ಸಾವಿರ ರೂಪಾಯಿಗಾಗಿ. ಹಣದ ವಿಚಾರವಾಗಿ ಮೂವರ ನಡುವೆ ಜಗಳವಾಗಿದೆ. ಹಿರಿಯರು ಬುದ್ದಿವಾದ ಹೇಳಿದ್ರು. ಆದ್ರೆ, ಇಷ್ಟಕ್ಕೆ ಬಿಡದ ಸುಹೈಲ್ ಹಾಗೂ ಫರ್ಹಾನ್ ಸುಭಾಷ ಪಾರ್ಕ್ ಬಡಾವಣೆಗೆ ಕರೆದು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!