ಪ್ರಜಾಸ್ತ್ರ ಸಿನಿಮಾ
ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ ನೂತನ ಕ್ಯಾರವಾನ್ ಅಪಘಾತವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಣಾಪಾಯವಾಗಿಲ್ಲ. ಕ್ಯಾರವಾನ್ ಚಾಲಕ ಬ್ರೇಕ್ ಹಾಕಿದಾಗಿ ಹಿಂದಿನಿಂದ ಬರ್ತಿದ್ದ ಲಾರಿ ಗುದ್ದಿದೆ. ಸಣ್ಣದಾದ ಅಪಘಾತದಿಂದಾಗಿ ಚಾಲಕ, ನಟ ಹಾಗೂ ಮೇಕಪ್ ಮ್ಯಾನ್ ಸೇಫ್ ಆಗಿದ್ದಾರೆ.
ಪೂರ್ವ ಗೋದಾವರಿಯಲ್ಲಿ ಪುಷ್ಪ ಸಿನಿಮಾ ಶೂಟಿಂಗ್ ಮುಗಿಸಿ ಹೈದ್ರಾಬಾದ್ ಗೆ ವಾಪಸ್ ಆಗುತ್ತಿದ್ದಾಗ ಅಪಘಾತ ನಡೆದಿದೆ. ನಟ ಅಲ್ಲು ಅರ್ಜುನ ಮನೆಗೆ ಹೋಗಿದ ಬಳಿಕ ಕುಟುಂಬದ ಜೊತೆಗೆ ಫೋಟೋ ಇನ್ಸ್ ಟಾಗ್ರಾಮ್ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲವೆಂದು ಹೇಳಲಾಗಿದೆ. ಅಪಘಾತದ ಬಗ್ಗೆ ಖಾಮ್ಮಮ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.