ಪ್ರಜಾಸ್ತ್ರ ಸುದ್ದಿ
ಸಿರವಾರ: ಈಚರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಹೊಕ್ರಾಣಿ ಕ್ರಾಸ್ ಹತ್ತಿರ ನಡೆದಿದೆ.
ಬಸವರಾಜ್ ಮಾಸಳಿ(40), ಇವರ ಪುತ್ರ ನರೇಶ್(8) ಹಾಗೂ ಚಿಕ್ಕಮ್ಮ ಮಾಸಳಿ(50) ಮೃತ ದುರ್ದೈವಿಗಳು. ಇವರೆಲ್ಲ ಕಲ್ಲೂರು ಗ್ರಾಮದ ನಿವಾಸಿಗಳಾಗಿದ್ದಾರೆ. ದುರಂತವೆಂದರೆ ಕುರ್ಡಿ ಗ್ರಾಮಕ್ಕೆ ಅಂತ್ಯಸಂಸ್ಕಾರಕ್ಕೆ ಹೊರಟಿದ್ದರು. ಆದರೆ, ಅವರೆ ಮೃತಪಟ್ಟಿರುವುದು ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.