ನಟ ಹಾಗೂ ನಿರ್ದೇಶಕ ರಘುರಾಮ ಇದೀಗ ಫುಲ್ ಗರಂ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿರುವ ಅವರು, ನಮ್ಮ ತಾಯಿ ಮತ್ತು ಕುಟುಂಬದ ತಂಟೆಗೆ ಬಂದ್ರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇಷ್ಟಕ್ಕೂ ಆಗಿದ್ದೇನು ಗೊತ್ತಾ?
ನಿರ್ದೇಶಕ ರಘುರಾಮ, ಪುನೀತರಾಜಕುಮಾರ ನಟನೆಯ ಯುವರತ್ನ ಚಿತ್ರದ ಟೀಸರ್ ಕುರಿತಾಗಿ ಪೋಸ್ಟ್ ವೊಂದು ಮಾಡಿದ್ದಾರೆ. ಇದಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಅದು ಡಿ ಬಾಸ್ ಅಭಿಮಾನಿಗಳ ಕಿತಾಪತಿ ಅನ್ನೋದು ಉಳಿದವರ ಮಾತಾಗಿದೆ. ಬೇರೆಯವರಿಗೆ ಬೈಯೋದು ಬಿಡ್ರೋ. ಅವರ ಅಭಿಪ್ರಾಯ ಅವರು ಹೇಳಿದ್ದಾರೆ ಅಂತಾ ಕಾಮೆಂಟ್ ಮಾಡಿದ್ದಾರೆ.