ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಕಿರುತರೆ ನಟ ಮಂಡ್ಯ ರವಿ ನಿಧನರಾಗಿದ್ದಾರೆ ಅನ್ನೋ ವಿಷಯ ಎಲ್ಲೆಡೆ ಹರಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟನ ತಂದೆ, ಮಗ ನಿಧನ ಹೊಂದಿಲ್ಲ. ಆರೋಗ್ಯ ಗಂಭೀರವಾಗಿದೆ ಎಂದಿದ್ದಾರೆ.
ಜಾಂಡೀಸ್ ಜೊತೆಗೆ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿದೆ. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ರವಿಯನ್ನು ಮಂಡ್ಯಕ್ಕೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದಿದ್ದಾರೆ. ರವಿ ಪ್ರಸಾದ್.ಎಂ ಮಂಡ್ಯ ರವಿ ಎಂದೇ ಖ್ಯಾತಿ ಪಡೆದವರು.
ಮುಕ್ತ ಮುಕ್ತ, ಮಿಂಚು, ಯಶೋಧೆ, ಚಿತ್ರಲೇಖ, ನಮ್ಮನೆ ಯುವರಾಣಿ, ಮಗಳು ಜಾನಕಿ, ವರಲಕ್ಷ್ಮಿ ಸ್ಟೋರ್ಸ್ ಸೇರಿದಂತೆ ಹಲವು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಕಾಫಿತೋಟ ಸೇರಿ ಹಲವು ಸಿನಿಮಾನಗಳಲ್ಲಿಯೂ ನಟಿಸಿದ್ದಾರೆ. ಅವರ ಸಾವಿನ ಸುದ್ದಿ ಸುಳ್ಳಾಗಲಿ ಎಂದು ಬಂಧು ಬಳಗದವರು, ಸ್ನೇಹಿತರು, ಅಭಿಮಾನಿಗಳು ಬೇಡಿಕೊಳ್ಳುತ್ತಿದ್ದಾರೆ.