ಜಾರಕಿಹೊಳಿ ಜೊತೆ ಒಂದಿಷ್ಟು ಮಂದಿ ಬರ್ತಾರೆ: ಈಶ್ವರಪ್ಪ

379

ಹುಬ್ಬಳ್ಳಿ : ರಮೇಶ ಜಾರಕಿಹೊಳಿ ಜೊತೆ ಇನ್ನು ಒಂದಿಷ್ಟು ಮಂದಿ ಬಿಜೆಪಿಗೆ ಬರುತ್ತಾರೆ ಅಂತಾ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಕುಂದಗೋಳ ಪ್ರಚಾರದ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತ್ನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರೋದು ಫಿಕ್ಸ್ ಅಂತಿದ್ದಾರೆ.

ಮೇ 23ರ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ. ಬಿಜೆಪಿಗೆ 104 ಸ್ಥಾನಗಳಿದ್ದು, ಇಬ್ಬರು ಪಕ್ಷೇತರರು ಸಾಥ್ ನೀಡಿದ್ದಾರೆ. ಕುಂದಗೋಳ ಹಾಗೂ ಚಿಂಚೋಳಿಯಲ್ಲಿ ಬಿಜೆಪಿ ಗೆಲ್ಲುವ ಮೂಲಕ 108 ಸ್ಥಾನಗಳನ್ನು ಹೊಂದಲಿದೆ. ಬಳಿಕ ಜಾರಕಿಹೊಳಿ ಜೊತೆ ಒಂದಿಷ್ಟು ಮಂದಿ ಬರ್ತಾರೆ ಅಂತಾ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಈ ಮೂಲಕ ಆಪರೇಷನ್ ಕಮಲ ನಡೆಯುತ್ತಿರೋ ಸುಳಿವು ನೀಡಿದ್ದಾರೆ ಎನ್ನಲಾಗ್ತಿದೆ.

ಇನ್ನು ಸಿಎಂ ಕುರ್ಚಿ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡ್ತಿದ್ದಾರೆ ಎಂದಿರುವ ಈಶ್ವರಪ್ಪ, ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಅನ್ನೋ ಕನಸು ನನಸಾಗುವುದಿಲ್ಲ ಅಂತಾ ಹೇಳಿದರು.




Leave a Reply

Your email address will not be published. Required fields are marked *

error: Content is protected !!