ಪ್ರಜಾಸ್ತ್ರ ಕ್ರೀಡಾ ಸುದ್ದಿ
ನವದೆಹಲಿಯಲ್ಲಿನ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 20 ಕ್ರೀಡಾ ಸಾಧಕರಿಗೆ ಅರ್ಜುನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾಜಿ ಕ್ರಿಕೆಟರ್ ದಿನೇಶ್ ಲಾಡ್ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ, ಮಾಜಿ ಟೇಬಲ್ ಟೆನ್ನಿಸ್ ಆಟಗಾರ ಶರತ್ ಕಮಲ್ ಅವರಿಗೆ ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ, ಧರ್ಮವೀರ್ ಸಿಂಗ್, ಬಿ.ಸಿ ಸುರೇಶ್ ಅವರಿಗೆ ಹಾಕಿ ಕ್ಷೇತ್ರದಿಂದ ಧ್ಯಾನಚಂದ್ ಪ್ರಶಸ್ತಿ, ಅಥ್ಲಟಿಕ್ ನಲ್ಲಿ ಅಶ್ವಿನಿ ಅಕ್ಕುಂಜಿ, ಪ್ಯಾರಾ ಅಥ್ಲಟಿಕ್ ನಲ್ಲಿ ನಿರ್ ಬಹದ್ದೂರ್ ಗುರುಂಗ್ ಅವರಿಗೆ ಪ್ರಶಸ್ತಿ ನೀಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಕ್ರಿಕೆಟ್ ನಲ್ಲಿ ಮೊಹಮ್ಮದ್ ಶೆಮಿ, ಕಬ್ಬಡ್ಡಿಯಿಂದ ಪವನ್ ಶೇರವತ್, ರಿತು ನೇಗಿ, ಅಥ್ಲಿಟಿಕ್ಸ್ ನಲ್ಲಿ ಮುರುಳಿ ಶ್ರೀಶಂಕರ್, ಪರುಲ್ ಚೌಧರಿ, ಚೆಸ್ ನಲ್ಲಿ ವೈಶಾಲಿ ರಮೇಶಬಾಬು, ಕುಸ್ತಿಯಲ್ಲಿ ಸುನಿಲ್ ಕುಮಾರ್, ಅಮಿತ್ ಪಂಗಲ್, ಹಾಕಿಯಲ್ಲಿ ಕೃಷ್ಣ ಪಾಠಕ್, ಶುಶಿಲ್ ಚಾನು, ಆರ್ಚಿಯಲ್ಲಿ ಅದಿತಿ ಸ್ವಾಮಿ, ಓಜಸ್ ಪ್ರವೀಣ್ ಡೆಟೊಲೆ, ಟೆಬಲ್ ಟೆನ್ನಿಸ್ ನಲ್ಲಿ ಆಹಿಕಾ ಮುಖರ್ಜಿ, ಬಾಕ್ಸಿಂಗ್ ಮೊಹಮ್ಮದ್ ಹುಸಮುದ್ದಿನ್, ಶೂಟಿಂಗ್ ನಲ್ಲಿ ಇಶಾ ಸಿಂಗ್, ಐಶ್ವರ್ಯ ಪ್ರತಾಪ್ ಸಿಂಗ್ ತೊಮರ್, ಚೀನಾ ಮಾದರಿಯ ವಾಷು ಕ್ರೀಡೆಯಿಂದ ನಯೊರಿಮ್ ರೋಶಬಿನ್ ದೇವಿ, ಗಾಲ್ಪ್ ದಿಕ್ಷಾ ದಗಾರ್, ಸ್ಕ್ಯಾಶ್ ನಲ್ಲಿ ಹರಿಂದ್ರ್ ಪಾಲ್ ಸಾಂಧು ಹಾಗೂ ಪ್ಯಾರ್ ಆರ್ಚರಿಯಲ್ಲಿ ಶೀತಲ್ ದೇವಿ ಅವರಿಗೆ ಅರ್ಜುನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.