ಬ್ರೇಕಿಂಗ್ ನ್ಯೂಸ್
Search

ಎಟಿಎಂ ಹಲ್ಲೆ ಪ್ರಕರಣ: ಅಪರಾಧಿ ಮಧುಕರಗೆ ಜೈಲು ಶಿಕ್ಷೆ

254

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಕಳೆದ 2013ರಲ್ಲಿ ಎಟಿಎಂನಲ್ಲಿ ಮಹಿಳೆಗೆ ಗಂಭೀರವಾಗಿ ಹಲ್ಲೆ ಮಾಡಿ ಹಣ ದೋಚಿದ ಕಿರಾತಕ ಮಧುಕರ ರೆಡ್ಡಿಗೆ 12 ವರ್ಷಗಳ ಜೈಲು ಶಿಕ್ಷೆಯಾಗಿದೆ. ನಗರದ 65ನೇ ಸಿಸಿಎಚ್ ಕೋರ್ಟ್ ರೆಡ್ಡಿಗೆ ಶಿಕ್ಷೆ ಪ್ರಕಟಿಸಿದೆ.

ನವೆಂಬರ್ 19, 2013ರಲ್ಲಿ ಜ್ಯೋತಿ ಉದಯ ಎಂಬುವರು, ಎಸ್.ಜೆ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕಾರ್ಪೂರೇಷನ್ ಬ್ಯಾಂಕ್ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋಗಿದ್ರು. ಈ ವೇಳೆ ಒಳಗೆ ನುಗ್ಗಿದ ಮೇಲೆ ಮಧುಕರ ರೆಡ್ಡಿ ಶೆಟರ್ ಎಳೆದು ಅವರ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದ.

ಈ ಘಟನೆ ಇಡೀ ರಾಜ್ಯವನ್ನೆ ಬೆಚ್ಚಿಬೀಳಿಸಿತ್ತು. ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿತ್ತು. 6 ತಿಂಗಳ ಕಾಲ ಬ್ಯಾಂಕ್ ನಲ್ಲಿ ಚಿಕಿತ್ಸೆ ಪಡೆದ ಜ್ಯೋತಿ ಉದಯ ಗುಣಮುಖರಾಗಿದ್ದರು. ಮುಂದೆ 2017ರಲ್ಲಿ ಮದನಪಲ್ಲಿಯಲ್ಲಿ ಪೊಲೀಸರು ಮಧುಕರ ರೆಡ್ಡಿಯನ್ನ ಬಂಧಿಸಿದ್ರು. ಇದೀಗ ಕಿರಾತಕನಿಗೆ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ.




Leave a Reply

Your email address will not be published. Required fields are marked *

error: Content is protected !!