ಪತ್ರಕರ್ತ ಪೂನಿಯಾಗೆ ಜಾಮೀನು

268

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳನ್ನ ವಿರೋಧಿಸಿ ಸಿಂಘು ಗಡಿಯಲ್ಲಿ ರೈತರು ನಡೆಸಿರುವ ಪ್ರತಿಭಟನೆಯ ವರದಿ ಮಾಡಲು ಹೋದ ಪತ್ರಕರ್ತ ಮಂದೀಪ ಪೂನಿಯಾರನ್ನ ಬಂಧಿಸಲಾಗಿತ್ತು. ಕಳೆದ ಭಾನುವಾರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಮಂಗಳವಾರ ಅವರಿಗೆ ಜಾಮೀನು ನೀಡಲಾಗಿದೆ.

ಆರೋಪಿ ಅರ್ಜಿದಾರ ಪೊಲೀಸರ ಮೇಲೆ ಯಾವುದೇ ಪ್ರಭಾವ ಬೀರುವ ವ್ಯಕ್ತಿಯಲ್ಲವೆಂದು ಕೋರ್ಟ್ ಹೇಳಿದೆ. ಇನ್ನು ಅನುಮತಿ ಇಲ್ಲದೆ ದೇಶ ಬಿಡುವಂತಿಲ್ಲ. ವಿಚಾರಣೆಗೆ ಕರೆದಾಗ ಬರಬೇಕು. ಸಾಕ್ಷಿಗಳನ್ನು ನಾಶ ಪಡಿಸಬಾರದು ಎಂದು ಹೇಳಲಾಗಿದೆ.

ಪತ್ರಕರ್ತ ಮಂದೀಪ ಪೂನಿಯಾ ವಿರುದ್ಧ ಐಪಿಸಿ ಸೆಕ್ಷನ್ 353( ಹಲ್ಲೆ ಅಥವ ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಭಂಗ), 186ರ (ಸಾರ್ವಜನಿಕ ಕಾರ್ಯನಿರ್ವಹಿಸುವವರನ್ನ ತಡೆಯುವುದು) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!