ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ: ಐವರ ಬಂಧನ

307

ಬೆಂಗಳೂರು: ನಗರದ ಸಾಧಿಕ್ ಲೇಔಟ್ ನಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದ ಐವರನ್ನ ಹೆಣ್ಣೂರು ಠಾಣೆ ಪೊಲೀಸ್ರು ಬಂಧಿಸಿದ್ದಾರೆ. ಸುಹೇಲ ಭಾಷಾ, ಸಗೀರ ಶರೀಫ, ಸರ್ಫರಾದ, ಮೊಹಮ್ಮದ ಮುಸ್ತಾಪ ಹಾಗೂ ಅನ್ಸಾರ ಜುಬ್ಬಾರ ಅನ್ನೋ ಐವರನ್ನ ಬಂಧಿಸಲಾಗಿದೆ.

ಕರೋನಾ ಭೀತಿ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರು, ನರ್ಸ್ ಗಳು ಸಾಧಿಕ್ ನಗರಕ್ಕೆ ಭೇಟಿ ನೀಡಿದ ವೇಳೆ ಅವರ ಮೇಲೆ ಹಲ್ಲೆ ಮಾಡಲಾಗಿತ್ತು. ಅವರ ಬಳಿಯಿದ್ದ ದಾಖಲೆಗಳನ್ನ ಹರಿದು ಹಾಕಲಾಗಿತ್ತು.ಇದರ ಜೊತೆಗೆ ನಿಮ್ಗೆ ಯಾವುದೇ ಮಾಹಿತಿ ಕೊಡುವುದಿಲ್ಲವೆಂದು ಮಸೀದಿಯ ಮೈಕ್ ನಲ್ಲಿ ಅನೌನ್ಸ್ ಮಾಡಿದ್ರು. ಇಷ್ಟೆಲ್ಲ ನಡೆದ್ಮೇಲೆ ಆಶಾ ಕಾರ್ಯಕರ್ತೆಯರು ವಿಡಿಯೋದಲ್ಲಿ ತಮ್ಮ ಅಳಲ್ಲನ್ನ ತೋಡಿಕೊಂಡಿದ್ರು.




Leave a Reply

Your email address will not be published. Required fields are marked *

error: Content is protected !!