ಪ್ರಜಾಸ್ತ್ರ ಸುದ್ದಿ
ತುಮಕೂರು: ಬೈಕ್ ರೈಡಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಮತ್ತೊಂದು ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ಮೃತಪಟ್ಟ ಘಟನೆ ಕುಣಿಗಲ್ ತಾಲೂಕಿನ ಗವಿಮಠದ ಹತ್ತಿರ ನಡೆದಿದೆ. 27 ವರ್ಷದ ಸೂರಜ್ ಮೃತ ದುರ್ದೈವಿ.
ವಾರಂತ್ಯವಾಗಿದ್ದರಿಂದ ಸ್ನಹಿತ ಅಜಯ್ ಜೊತೆಗೆ ಡುಕಾಟಿ ಬೈಕಿನಲ್ಲಿ ಬೆಂಗಳೂರಿನಿಂದ ಬೈಕ್ ರೈಡಿಂಗ್ ಮಾಡಿಕೊಂಡು ಹೊರಟಿದ್ದರು. ತುಂಬಾ ವೇಗವಾಗಿ ಬರುತ್ತಿದ್ದಾಗ ವಾಹನವೊಂದಕ್ಕೆ ಡಿಕ್ಕಿಯಾಗಿ ರಾಷ್ಟ್ರೀಯ ಹೆದ್ದಾರಿ 72ರ ಹತ್ತಿದ ಸೇತುವೆಯಿಂದ ಕೆಳಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.