ಪ್ರಜಾಸ್ತ್ರ ಅಪರಾಧ ಸುದ್ದಿ
ಮಂಗಳೂರು: ಗುರುವಾರ ಸಂಜೆ 8 ವರ್ಷದ ಬಾಲಕನ್ನ ಉಜಿರೆಯಲ್ಲಿ ಅಪಹರಣ ಮಾಡಲಾಗಿದೆ. ಹಳದಿ ನಂಬರ್ ಪ್ಲೇಟ್ ಹೊಂದಿರುವ ಇಂಡಿಕಾ ಕಾರಿನಲ್ಲಿ ಬಂದ ಅಪಹರಣಕಾರರು, ಶಿವನ್ ಬಿಜೋಯ್ ಹಾಗೂ ಪತಿ ಸರಿಯಾ ದಂಪತಿಯ ಮಗನನ್ನ ಕಿಡ್ನಾಪ್ ಮಾಡಲಾಗಿದೆ.
ಮಾಜಿ ಸೈನಿಕನಾಗಿರುವ ಶಿವನ್ ಬಿಜೋಯ್ ಉದ್ಯಮಿ ಸಹ ಆಗಿದ್ದಾರೆ. ಹಾರ್ಡ್ ವೇರ್ ಉದ್ಯಮಿಯಾಗಿರುವ ಶಿವನ್ ಮಗನ ಅಪಹರಣದ ಹಿಂದೆ ಹಣದ ವ್ಯವಹಾರದ ತಕರಾರು ಇರಬಹುದು ಎನ್ನಲಾಗ್ತಿದೆ. ಹೀಗಾಗಿ ಪೊಲೀಸರು ಎಲ್ಲೆಡೆ ಕಾರ್ಯಾಚರಣೆ ನಡೆಸಿದ್ದಾರೆ.
ಶಿವನ್ ಪತ್ನಿಗೆ ಪೋನ್ ಮಾಡಿ 17 ಕೋಟಿಗೆ ಬೇಡಿಕೆ ಇಟ್ಟಿರುವ ಕಿಡ್ನಾಪರ್ಸ್, ಚಾರ್ಮಡಿ ಕಾಡಿನ ಪ್ರದೇಶದಲ್ಲಿರುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಹೀಗಾಗಿ ಚಾರ್ಮಡಿ, ಬೆಳ್ತಂಗಡಿ, ಕೊಟ್ಟಿಗೆಹಾರ ಪ್ರದೇಶ ಸೇರಿ ಎಲ್ಲ ಕಡೆ ನಾಕಾಬಂಧಿ ಹಾಕಲಾಗಿದೆ.