ಕ್ಯಾಬ್ ವಿರೋಧಿಸಿ ಪ್ರತಿಭಟನೆ: ಇಬ್ಬರು ಬಲಿ

432

ಮಂಗಳೂರು: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ನಗರದಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿತು. ಇದರ ಪರಿಣಾಮ ಪೂಲೀಸ್ರು ಅಶ್ರುವಾಯು ಸಿಡಿಸಿದ್ರು. ಮತ್ತಷ್ಟು ಹಿಂಸಾಸ್ವರೂಪ ಪಡೆದುಕೊಂಡಾಗ ನಡೆದ ಶೂಟೌಟ್ ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಕದ್ರಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಆಯುಕ್ತರು ಹಾಗೂ ಮುಸ್ಲಿಂ ಧಾರ್ಮಿಕ ಮುಖಂಡರು ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಇಬ್ಬರು ಮೃತಪಟ್ಟಿರುವುದಾಗಿ ಹೇಳಿದ್ರು. ಕಂದಲ್ ನಿವಾಸಿ ಜಲೀಲ ಹಾಗೂ ಬೆಂಗ್ರೆ ನಿವಾಸಿ ನೌಶೀನ ಬಲಿಯಾಗಿದ್ದಾರೆ. ಮುಸ್ಲಿಂರು ಶಾಂತಿ ಕಾಪಾಡಬೇಕೆಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮನ್ಸೂದ ಮನವಿ ಮಾಡಿದ್ದಾರೆ.

ನಗರದ ರಾವ್ ಅಂಡ್ ರಾವ್ ಸರ್ಕಲ್ ಬಳಿ ಈ ಒಂದು ಘಟನೆ ನಡೆದಿದೆ. ಇದಕ್ಕೂ ಮೊದ್ಲು 6 ಜನರು ಗಾಯಗೊಂಡಿದ್ದಾರೆ ಅಂತಾ ಹೇಳಲಾಗಿತ್ತು. ಇದೀಗ ಇಬ್ಬರು ಸಾವನ್ನಪ್ಪಿರುವುದು ಖಚಿತ ಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!