ಬೆಂಗಳೂರು: ನಗರದ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತು ಮದುವಣಗಿತ್ತಿಯಂತೆ ಸಿಂಗಾರಗೊಳ್ತಿದೆ. ಯಾಕಂದ್ರೆ ಇದೇ ಭಾನುವಾರ ಚಿತ್ರಸಂತೆ ನಡೆಯಲಿದೆ.
ಜನವರಿ 5 2020ರಂದು 17ನೇ ಚಿತ್ರಸಂತೆ ನಡೆಯಲಿದೆ. ‘ನೇಗಿಲಯೋಗಿ ರೈತರಿಗೆ’ ಈ ಬಾರಿಯ ಚಿತ್ರಸಂತೆಯನ್ನ ಸಂರ್ಪಣೆ ಮಾಡಲಾಗಿದ್ದು ಭರದಿಂದ ಸಿದ್ಧತೆ ನಡೆದಿದೆ. ಫೈನ್ ಆರ್ಟ್ಸ್ ಕಾಲೇಜಿನ ವಿದ್ಯಾರ್ಥಿಗಳು ಇಡೀ ಅಂಗಳವನ್ನ ಚೆಂದವಾಗಿಸ್ತಿದ್ದಾರೆ.
ಹಳ್ಳಿ ಸೊಗಡನ್ನ ಕಟ್ಟಿ ಕೊಡುವ ನಿಟ್ಟಿನಲ್ಲಿ ಎತ್ತಿನಗಾಡಿ, ಕಂದೀಲು, ಬುಟ್ಟಿ, ಗೊಂಬೆಗಳು ಸೇರಿದಂತೆ ಹತ್ತು ಹಲವು ವಸ್ತುಗಳಿಂದ ತಯಾರಿ ನಡೆಸಲಾಗ್ತಿದೆ. ಭಾನುವಾರ ನಡೆಯುವ ಚಿತ್ರಸಂತೆಯಲ್ಲಿ ಸುಮಾರು 10-15 ಲಕ್ಷ ಜನ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.