ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ಸಂಜೆ ಶಾಸಕರು ಹಾಗೂ ಸಂಸದರ ಭೇಟಿಯಾಗಿ ಮುಂದಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಇಂದು ಸಂಜೆ ರೇಸ್ ಕೋರ್ಸ್ ನಿವಾಸದಲ್ಲಿ ಭೇಟಿಗೆ ಮುಂದಾಗಿದ್ದಾರೆ.
ಈಗಾಗ್ಲೇ ಶಾಸಕರು ಹಾಗೂ ಸಂಸದರ ಭೇಟಿ ನಡೆಸಿದ್ದು, ಮಸಾಲೆ ಜಯರಾಮ್, ಅಮೃತ್ ದೇಸಾಯಿ, ಬೆಳ್ಳಿ ಪ್ರಕಾಶ್, ಕೃಷ್ಣಪ್ಪ, ಎಸ್.ರಘು, ರವಿ ಸುಬ್ರಹ್ಮಣ್ಯ, ಎಚ್.ವಿಶ್ವನಾಥ್ ಸೇರಿದಂತೆ ಅನೇಕರು ಈಗಾಗ್ಲೇ ಭೇಟಿ ಮಾಡಿದ್ದಾರೆ. ಈ ಭೇಟಿ ಸಂಜೆಯ ತನಕ ನಡೆಯುತ್ತಿದೆ.