ಪ್ರಜಾಸ್ತ್ರ ಸುದ್ದಿ
ತುಮಕೂರು: ಬಾಲಿವುಡ್ ನಟಿ ಕಂಗನಾ ರಣೌತ್ ವಿರುದ್ಧ ದೂರು ದಾಖಲಾಗಿದೆ. ರಮೇಶ ನಾಯಕ ಎಂಬುವರು ಜಿಎಂಎಫ್ ಸಿ ಕೋರ್ಟ್ ನಲ್ಲಿ ನಟಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ಕೃಷಿ ಮಸೂದೆ ವಿರುದ್ಧ ದೇಶದಲ್ಲಿ ನಡೆಯುತ್ತಿರುವ ಹೋರಾಟಗಳಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದ ಕಂಗನಾ ರಣೌತ್, ರೈತಪರ ಹೋರಾಟಗಾರರನ್ನ ಉಗ್ರರಿಗೆ ಹೋಲಿಸಿ ಮಾತ್ನಾಡಿದ್ರು. ಈ ಸಂಬಂಧ ನಟಿ ವಿರುದ್ಧ ದೂರು ದಾಖಲಾಗಿದೆ.