ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕೋವಿಡ್ ಪ್ರತಿದಿನ ಹೆಚ್ಚಾಗುತ್ತಿದೆ. ನಿನ್ನೆ 12 ಸಾವಿರ, ಇಂದು 21 ಸಾವಿರ ಆಗಿದೆ. ಇದರಿಂದಾಗಿ ಬಡವರ, ಮಧ್ಯಮವರ್ಗದವರು ಸಾಕಷ್ಟು ಸಮಸ್ಯೆಯಾಗಿದೆ. ಪಾದಯಾತ್ರೆಯಲ್ಲಿರುವ ಅನೇಕ ನಾಯಕರಿಗೂ ಕರೋನಾ ಬಂದಿದೆ. ಇದು ಗೊತ್ತಿದ್ದವರು, ಗೊತ್ತಿಲ್ಲದೆ ಇರುವ ಎಷ್ಟು ಸಾವಿರ ಜನಕ್ಕೆ ಕರೋನಾ ಬಂದಿದೆ ಗೊತ್ತಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಪಾದಯಾತ್ರೆ ತಡೆಯುವುದಕ್ಕೆ ಏನು ಕ್ರಮ ತೆಗೆದುಕೊಳ್ಳಬೇಕು ಅನ್ನೋದು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಕೋರ್ಟ್ ಅವರಿಗೂ ಕೇಳಿದೆ. ನಿನ್ನೆ ರಾತ್ರಿ ನೋಟಿಸ್ ಅವರಿಗೆ ನೀಡಲಾಗಿದೆ. ಹೀಗಾಗಿ ಅವರು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬೇಕು ಅಂದುಕೊಂಡಿದ್ದೇನೆ. ಒಂದು ವೇಳೆ ಅವರು ನಿಲ್ಲಿಸದೆ ಹೋದರೆ ಕಾನೂನು ಪ್ರಕಾರ ಏನು ಮಾಡಬೇಕು ಅದನ್ನು ಮಾಡುತ್ತೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.