ಬೆಂಗಳೂರು: ಪತ್ರಕರ್ತರಲ್ಲಿಯೂ ಕರೋನಾ ಸೋಂಕು ಕಾಣಿಸಿಕೊಳ್ತಿರುವ ಹಿನ್ನೆಲೆಯಲ್ಲಿ, ಇವರಿಗೆ ಪರೀಕ್ಷೆ ನಡೆಸಲು ಸಿಎಂ ಆದೇಶಿಸಿದ್ದಾರೆ. ಈ ಮೂಲಕ ಶಿಕ್ಷಣ ಸಚಿವ ಸುರೇಶ ಅವರು ಬರೆದ ಪತ್ರಕ್ಕೆ ತಕ್ಷಣವೇ ಸ್ಪಂದಿಸಿದ್ದಾರೆ.
ವಾರ್ತಾ ಇಲಾಖೆಯ ಆಯುಕ್ತರಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಸೂಚನೆ ನೀಡಿದ್ದು, ರಾಜ್ಯದಲ್ಲಿರುವ ಪತ್ರಕರ್ತರಿಗೆ ಕರೋನಾ ಪರೀಕ್ಷೆ ಮಾಡಿಸಲು ಆದೇಶ ಹೊರಡಿಸಿದ್ದಾರೆ.