ಬಿಜಾಪುರ: ಕೋವಿಡ್ 19ನಿಂದಾಗಿ ಇಡೀ ದೇಶವೇ ಲಾಕ್ ಡೌನ್ ಮಾಡಲಾಗಿದೆ. ಮೇ 3ರ ತನಕ ಲಾಕ್ ಡೌನ್ ಮುಂದುವರೆಸಲಾಗಿದೆ. ಹೀಗಾಗಿ ದೂರದ ಊರಿಗೆ ಕೂಲಿ ಕೆಲಸಕ್ಕೆ ಹೋದ ಅದೆಷ್ಟೋ ಕಾರ್ಮಿಕರು ಕಾಲ್ನಡಿಗೆ ಮೂಲಕ ಊರು ಸೇರುತ್ತಿದ್ದಾರೆ. ಹೀಗೆ ಕಾಲ್ನಡಿಗೆಯ ಪಯಣ ಇನ್ನೂ ನಿಂತಿಲ್ಲ.
ತೆಲಂಗಾಣದಿಂದ ಛತ್ತಿಸಗಢದ ಬಿಜಾಪುರ ಜಿಲ್ಲೆಗೆ ಕಾಲ್ನಡಿಗೆ ಪಯಣ ಮಾಡಿದ 12 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ತೆಲಂಗಾಣದ ಜಮೀನೊಂದರಲ್ಲಿ ಇತರೆ 11 ಜನರೊಂದಿಗೆ ಕೆಲಸ ಮಾಡ್ತಿದ್ದಳು. ಏಪ್ರಿಲ್ 15 ರಂದು ಕಾಲ್ನಡಿಗೆ ಮೂಲಕ ಊರಿಗೆ ಹೊರಟಿದ್ದಾರೆ. ಹೆದ್ದಾರಿ ತಪ್ಪಿಸಿ ಕಾಡು ದಾರಿ ಹಿಡಿದುಕೊಂಡು ಪ್ರಯಾಣ ಶುರು ಮಾಡಿದ್ದಾರೆ. ಕಳೆದ ಶನಿವಾರ ಆಕೆಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಆಗ ಮನೆ ತಲುಪಲು ಉಳಿದಿದ್ದು 14 ಕಿಲೋ ಮೀಟರ್. ಅಷ್ಟರಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾಳೆ.
ತೀವ್ರ ನಿರ್ಜಲಿಕರಣ, ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಬಾಲಕಿ ಮೃತಪಟ್ಟಿದ್ದು, ಆಕೆಗೆ ಸೋಂಕು ತಗುಲಿರಲಿಲ್ಲವೆಂದು ಜಿಲ್ಲಾ ಹಿರಿಯ ವೈದ್ಯಕೀಯ ಅಧಿಕಾರಿ ಬಿ.ಆರ್ ಪೂಜಾರಿ ತಿಳಿಸಿದ್ದಾರೆ. ಮೂರು ತಿಂಗಳಿಂದ ತೆಲಂಗಾಣದಲ್ಲಿ ಕೆಲಸ ಮಾಡ್ತಿದ್ದಳು. 3 ದಿನಗಳ ಕಾಲ ನಡೆದು ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿತ್ತು ಎಂದು ಆಕೆ ತಂದೆ ಹೇಳಿದ್ದಾನೆ. ಛತ್ತೀಸಗಢ ಸರ್ಕಾರ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಏನೂ ಘೋಷಿಸಿದ್ರೇನು ಮಾಡೋದು ಬಾಳಿ ಬದುಕಬೇಕಾದ ಜೀವ ಹೋಗಿದೆ. ಕರೋನಾ ಅನ್ನೋದು ನಿಜಕ್ಕೂ ಕ್ರೂರಿ…