ರಾಮನಗರ: ಪಾದರಾಯನಪುರ ಗಲಾಟೆಗೆ ಸಂಬಂಧಿಸಿದ ವರದಿಗೆ ಹೋಗಿ ವಾಪಸ್ ಬರುವ ಟೈಂನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಖಾಸಗಿ ಸುದ್ದಿ ವಾಹಿನಿಯ ವರದಿಗಾರ ಮೃತಪಟ್ಟಿದ್ದಾರೆ. ಪತ್ರಕರ್ತ ಹನಮಂತು ಮೃತ ದುರ್ದೈವಿ.
ಪಾದರಾಯನಪುರ ಗಲಭೆಯ ಆರೋಪಿಗಳನ್ನ ರಾಮನಗರದ ಕಾರಾಗೃಹಕ್ಕೆ ಕರೆತರಲಾಗಿದೆ. ಇದರ ಸುದ್ದಿ ಮಾಡಿ ಬರುತ್ತಿದ್ದ ರಾಮನಗರ ವರದಿಗಾರನ ಬೈಕ್ ಗೆ ಹಿಂದನಿಂದ ಬಂದ ಎಟಿಎಂ ವಾಹನ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾರೆ. ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಗೆ ಮೃತದೇಹ ರವಾನಿಸಲಾಗಿದೆ. ಇದು ಜಿಲ್ಲಾ ಪತ್ರಕರ್ತರಿಗೆ ಆಘಾತ ತಂದಿದೆ.
ಕಳೆದ 6 ವರ್ಷಗಳಿಂದ ರಾಮನಗರದಲ್ಲಿ ಪಬ್ಲಿಕ್ ಟಿವಿ ವರದಿಗಾರನಾಗಿ ಕೆಲಸ ಮಾಡ್ತಿದ್ದ ಹನಮಂತು, ಮೂರು ವರ್ಷದ ಹಿಂದೆ ಮದ್ವೆಯಾಗಿದ್ದ. ಇವರಿಗೆ 1 ವರ್ಷದ ಮಗುವಿದೆ.