‘ವಿಕು’ ಜಾಮೀನು ಅರ್ಜಿ ವಜಾ

243

ಪ್ರಜಾಸ್ತ್ರ ಸುದ್ದಿ

ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೇಶಗೌಡ ಹತ್ಯೆ ಪ್ರಕರಣ ಸಂಬಂಧ ಜೈಲು ಪಾಲಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಜಾಗೊಂಡಿದೆ. ಹೀಗಾಗಿ ಅವರಿಗೆ ಜೈಲೇ ಫಿಕ್ಸ್ ಆಗುವ ಸಾಧ್ಯತೆಯಿದೆ.

ಇಷ್ಟು ದಿನಗಳ ಕಾಲ ಜಾಮೀನು ಅರ್ಜಿಯನ್ನ ಮುಂದೂಡುತ್ತಾ ಬಂದಿದ್ದ ಸಿಬಿಐ ವಿಶೇಷ ಕೋರ್ಟ್, ಸೋಮವಾರ ಅರ್ಜಿಯನ್ನ ವಜಾಗೊಳಿಸಿದೆ. ಹೀಗಾಗಿ ಇವರ ಸೆರೆಮನೆ ವಾಸ ಮುಂದುವರೆದಿದೆ. ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ವಿನಯ ಕುಲಕರ್ಣಿ ಬೆಳಗಾವಿಯ ಹಿಂಡಲಾ ಜೈಲಿನಲ್ಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!